GIT add 2024-1
Laxmi Tai add
Beereshwara 33

ಗಣೇಶಪುರ ಜನರ ಬಹುವರ್ಷದ ಬೇಡಿಕೆ ಈಡೇರಿಕೆ

25 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ

Anvekar 3
Cancer Hospital 2
​ ಬೆಳಗಾವಿ –​  ಗಣೇಶಪುರ ಗ್ರಾಮದ ಬಹುವರ್ಷಗಳ ಬೇಡಿಕೆಯಾಗಿದ್ದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪೂಜೆ ನೆರವೇರಿಸಿದರು.
ಸುಮಾರು ಇಪ್ಪತೈದು ಲಕ್ಷ ರೂ. ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣವಾಗಲಿದೆ. ಹಿಂದಿನ ಶಾಸಕರು, ಗ್ರಾಮಕ್ಕೆ ಬರುವ ಎಲ್ಲ ಗಣ್ಯರಿಗೆ ಮನವಿ ಸಲ್ಲಿಸುತ್ತಿದ್ದ ಜನರು, ಸಮುದಾಯ ಭವನಕ್ಕಾಗಿ ಪಡದ ಪಾಡಿಲ್ಲ. ಆದರೆ ಯಾರಿಂದಲೂ ಫಲ ದೊರೆಯದಿದ್ದಾಗ ಗ್ರಾಮಸ್ಥರು ನಿರಾಶರಾಗಿದ್ದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನಿರಂತರ ಪ್ರಯತ್ನ ಮಾಡಿ ಗ್ರಾಮಸ್ಥರ ಬಹುವರ್ಷಗಳ ಬೇಡಿಕೆ ಈಡೇರಿಸುವ ಮೂಲಕ ಜನರ ಮೊಗದಲ್ಲಿ ಖುಷಿ ಮೂಡಿಸಿದರು.
  ಕಟ್ಟಡದ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿದ ಶಾಸಕಿ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
Emergency Service
 ಕ್ಷೇತ್ರಾದ್ಯಂತ ಹಲವಾರು ಅಭಿವೃದ್ಧಿಯ ಕಾರ್ಯಗಳನ್ನು  ನೆರವೇರಿಸುತ್ತ, ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತ ಬಂದಿರುವ ಲಕ್ಷ್ಮಿ ಹೆಬ್ಬಾಳಕರ್, ಮುಂದಿನ ಮೂರೂವರೆ ವರ್ಷದಲ್ಲಿ ಗ್ರಾಮವನ್ನು ಎಂದೂ ಕಾಣದಂತೆ ಅಭಿವೃದ್ಧಿಪಡಿಸುವ ಕನಸು ಹೊಂದಿದ್ದಾರೆ.
 ರಾಜ್ಯದಲ್ಲಿ ಉಪಚುನಾವಣೆಯ ರಾಜಕೀಯ ತೀವ್ರವಾಗಿದ್ದರೂ ಆ ಬಗ್ಗೆ ಹೆಚ್ಚಿನ ಗಮನ ಕೊಡದೆ, ಪಕ್ಷ ವಹಿಸುವ ಜವಾಬ್ದಾರಿಯನ್ನು ನಿರ್ವಹಿಸಲು ಬದ್ದನಾಗಿರುವುದಾಗಿ ವರಿಷ್ಠರಿಗೆ ಸಂದೇಶ ಕಳಿಸಿರುವ ಲಕ್ಷ್ಮಿ ಹೆಬ್ಬಾಳಕರ್, ಕ್ಷೇತ್ರದ ಅಭಿವೃದ್ಧಿ ಕೆಲಸದತ್ತ ಹೆಚ್ಚಿನ ಲಕ್ಷ್ಯವಹಿಸಿದ್ದಾರೆ.
  ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯ ಕೆಲಸಗಳನ್ನು ಕೈಗೊಳ್ಳುವುದಕ್ಕೆ ನಿಮ್ಮ ಪ್ರೀತಿ, ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು ಗ್ರಾಮಸ್ಥರದಲ್ಲಿ ಅವರು ಮನವಿ ಮಾಡಿದರು.
 ಪೂಜಾ ಸಮಾರಂಭದಲ್ಲಿ ಗ್ರಾಮದ ಹಿರಿಯರು,  ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಕಾರ್ಯಕರ್ತರು  ಉಪಸ್ಥಿತರಿದ್ದರು.
Bottom Add3
Bottom Ad 2