ಜನ್ಮ ದಿನಕ್ಕೆ ಹೋದ ಯುವಕನ ಭೀಕರ ಕೊಲೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನ್ಮ ದಿನಕ್ಕೆ ಕರೆದು ಸ್ನೇಹಿತನನ್ನೆ ಭೀಕರವಾಗಿ ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ. ಬಸವರಾಜ ಗುರುಲಿಂಗಪ್ಪ ಮುದ್ದಣ್ಣವರ ( 23) ಕೊಲೆಯಾದ ವ್ಯಕ್ತಿ. ಜನ್ಮ ದಿನಕ್ಕೆ ಕರೆದು ವೈಯಕ್ತಿಕ ಜಗಳಕ್ಕೆ ತಿರುಗಿ ನಾಲ್ಕೈದು ಜನ ಸೇರಿಕೊಂಡು ಬಸವರಾಜನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ದೆಹಲಿಯಿಂದ ಕೆನಡಾಗೆ ಹೊರಟ್ಟಿದ ವಿಮಾನಕ್ಕೆ ಬಾಂಬ್ ಬೆದರಿಕೆ