*ಅಂಗನವಾಡಿ ಆಹಾರ ಸಾಮಗ್ರಿಯನ್ನೂ ಹೊತ್ತೊಯ್ದ ಕಾರ್ಯಕರ್ತೆ; ಮೊಟ್ಟೆ ಬಳಿಕ ದಿನಸಿ ಸಾಮಗ್ರಿ ಕಳ್ಳಾಟ*

ಪ್ರಗತಿವಾಹಿನಿ ಸುದ್ದಿ: ಕೊಪ್ಪಳ ಜಿಲ್ಲೆಯ ಅಂಗನವಾಡಿಯೊಂದರಲ್ಲಿ ಮಕ್ಕಳಿಗೆ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನು ಎತ್ತಿಕೊಳ್ಳುತ್ತಿದ್ದ ಕಾರ್ಯಕರ್ತೆ, ಸಹಾಯಕಿಯನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡರೂ ಬುದ್ಧಿ ಕಲಿಯದ ಕೆಲ ಅಂಗನವಾಡಿ ಕಾರ್ಯಕರ್ತೆಯರು ಕಳ್ಳಾಟ ಮುಂದುವರೆಸಿದ್ದಾರೆ. ಕೊಪ್ಪಳದ ಬಳಿಕ ಇದೀಗ ಯಾದಗಿರಿ ಜಿಲ್ಲೆಯಲ್ಲಿ ಅಂಗನವಾಡಿಯೊಂದರಲ್ಲಿ ಮಕ್ಕಳ ದಿನಸಿಯನ್ನೇ ಕಾರ್ಯಕರ್ತೆ ಕದಿಯುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದ ಅಂಗನವಾಡಿಯೊಂದರಲ್ಲಿ ಕಾರ್ಯಕರ್ತೆ ಅಂಗನವಾಡಿಯ ದಿನಸಿ ಸಾಮಗ್ರಿಗಳನ್ನು ಮನೆಗೆ ಸಾಗಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾಳೆ. ಅಂಗನವಾಡಿ ಕಾರ್ಯಕರ್ತೆ ಉಮಾ ಎಂಬುವವಳು … Continue reading *ಅಂಗನವಾಡಿ ಆಹಾರ ಸಾಮಗ್ರಿಯನ್ನೂ ಹೊತ್ತೊಯ್ದ ಕಾರ್ಯಕರ್ತೆ; ಮೊಟ್ಟೆ ಬಳಿಕ ದಿನಸಿ ಸಾಮಗ್ರಿ ಕಳ್ಳಾಟ*