*ಹೆಲಿಕಾಪ್ಟರ್ ಹತ್ತುವಾಗ ಯಡಿಯೂರಪ್ಪಗೆ ಉಳುಕಿದ ಕಾಲು; ನೋವಿನಿಂದ ಹೆಜ್ಜೆ ಇಡಲಾಗದೇ ಕಷ್ಟಪಟ್ಟ ಮಾಜಿ ಸಿಎಂ*

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಲಿಕಾಪ್ಟರ್ ಹತ್ತುವಾಗ ಕಾಲು ಉಳುಕಿರುವ ಘಟನೆ ನಡೆದಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಶಿಕಾರಿಪುರದಿಂದ ರಾಯಚೂರಿಗೆ ತೆರಳುತ್ತಿದ್ದರು. ಈ ವೇಳೆ ಶಿಕಾರಿಪುರದಲ್ಲಿ ಹೆಲಿಕಾಪ್ಟರ್ ಹತ್ತುವಾಗ ಅಕಸ್ಮಾತ್ ಅಗಿ ಕಾಲು ಉಳುಕಿದೆ. ಆದಾಗ್ಯೂ ಪ್ರಯಾಣ ಮುಂದುವರೆಸಿದ ಯಡಿಯೂರಪ್ಪ ಹೆಲಿಕಾಪ್ಟರ್ ಹತ್ತಿದ್ದಾರೆ. ಆದರೆ ರಾಯಚೂರಿನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆದಾಗ ಹೆಲಿಕಾಪ್ಟರ್ ಮೆಟ್ಟಿಲುಗಳನ್ನು ಇಳಿಯುವಾಗ ನೋವಿನಿಂದ ಪರದಾಡುವಂತಾಯಿತು. ಲೊಕಸಭಾ ಚುನಾವಣೆಗೆ ತಯಾರಿ ನಿಟ್ಟಿನಲ್ಲಿ ಇಂದು ಶಿಕಾರಿಪುರದಿಂದ ರಾಯಚೂರಿನ ಲಿಂಗಸಗೂರಿಗೆ ಯಡಿಯೂರಪ್ಪ ಪ್ರಯಾಣ ಬೆಳೆಸಿದ್ದರು. … Continue reading *ಹೆಲಿಕಾಪ್ಟರ್ ಹತ್ತುವಾಗ ಯಡಿಯೂರಪ್ಪಗೆ ಉಳುಕಿದ ಕಾಲು; ನೋವಿನಿಂದ ಹೆಜ್ಜೆ ಇಡಲಾಗದೇ ಕಷ್ಟಪಟ್ಟ ಮಾಜಿ ಸಿಎಂ*