ಬೆಳಗಾವಿ: ನಿರ್ಬಂಧವಿದ್ದರೂ ಜಲಪಾತದ ಬಳಿ ಅಧಿಕಾರಿಗಳಿಂದಲೇ ಎಣ್ಣೆ ಪಾರ್ಟಿ ಮಾಡಿ ಹುಚ್ಚಾಟ; ಕೇಸ್ ದಾಖಲು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪೊಲೀಸರು ನಿರ್ಬಂಧ ವಿಧಿಸಿದ್ದರೂ ಅಧಿಕಾರಿಗಳೇ ಜಲಪಾತದ ಬಳಿ ಗುಂಡು ತುಂಡಿನ ಪಾರ್ಟಿ ಮಾಡಿ ಹುಚ್ಚಾಟ ಮೆರೆದಿರುವ ಘಟನೆ ಬೆಳಗಾವಿಯ ಜಾಂಬೋಟಿ ಬಳಿ ನಡೆದಿದೆ. ಹೆಸ್ಕಾಂ ಅಧಿಕಾರಿಗಳು, ವೈದ್ಯರ ತಂಡ ಜಾಂಬೋಟಿ ಬಳಿಯ ಬಟವಡೆ ಫಾಲ್ಸ್ ಬಳಿ ಟಿಕಾಣಿ ಹೂಡಿ, ಅಲ್ಲಿಯೇ ಭರ್ಜರಿ ಎಣ್ಣೆ ಪಾರ್ಟಿ ಮಾಡಿ, ಅಡುಗೆ ಮಾಡಿ ಸಂಭ್ರಮಿಸಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ಜಲಪಾತ, ನದಿಗಳು ಬೋರ್ಗರೆದು ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ಜಲಪಾತದ ಬಳಿ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಹೀಗಿದ್ದರೂ ಅಧಿಕಾರಿಗಳು, … Continue reading ಬೆಳಗಾವಿ: ನಿರ್ಬಂಧವಿದ್ದರೂ ಜಲಪಾತದ ಬಳಿ ಅಧಿಕಾರಿಗಳಿಂದಲೇ ಎಣ್ಣೆ ಪಾರ್ಟಿ ಮಾಡಿ ಹುಚ್ಚಾಟ; ಕೇಸ್ ದಾಖಲು