GIT add 2024-1
Laxmi Tai add
Beereshwara 33

ಆಸ್ಟ್ರೇಲಿಯಾಕ್ಕೆ ಬಿಳ್ಕೊಟ್ಟ ಬೆಂಗಳೂರು ಭಕ್ತರು

ಆಸ್ಟ್ರೇಲಿಯಾ ಸಿಡ್ನಿಯಲ್ಲಿ  ವೀರಶೈವ ಸಮಾಜದ ಹನ್ನೊಂದನೆಯ ವಾರ್ಷಿಕೋತ್ಸವ

Anvekar 3
Cancer Hospital 2
ಪ್ರಗತಿವಾಹಿನಿ ಸುದ್ದಿ,  ಬೆಂಗಳೂರು : ಆಸ್ಟ್ರೇಲಿಯಾ ಸಿಡ್ನಿಯಲ್ಲಿ  ವೀರಶೈವ ಸಮಾಜದ ಹನ್ನೊಂದನೆಯ ವಾರ್ಷಿಕೋತ್ಸವ ಸಮಾರಂಭ ಇದೇ ದಿನಾಂಕ 19 ರಂದು ಜರುಗುವುದು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳನ್ನು, ಬೇಬಿಮಠದ  ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಡಾ. ತ್ರಿನೇತ್ರ  ಮಹಾಂತ ಶಿವಯೋಗಿ ಮಹಾಸ್ವಾಮಿಗಳವರನ್ನು,  ಶಿವಗಂಗಾ ಕ್ಷೇತ್ರದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಹಾಗೂ ಬೆಂಗಳೂರು ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳನ್ನು  ಬೆಂಗಳೂರು ನಗರದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಟ್ಟರು.
 ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳವರು, ವೀರಶೈವಧರ್ಮ ಪುರಾತನ ಧರ್ಮ. ಈ ಧರ್ಮಕ್ಕೆ ಶ್ರೀ ಜಗದ್ಗುರು ಪಂಚಾಚಾರ್ಯರು ಬಸವಾದಿ ಪ್ರಮಥರು ಎರಡು ಕಣ್ಣುಗಳಿದ್ದಂತೆ. ಇವರ ವಿಚಾರಗಳನ್ನು ಹೊತ್ತು ವಿದೇಶಕ್ಕೆ ತೆರಳುತ್ತಿದ್ದೇವೆ.  ಎಲ್ಲರಿಗೂ ಇವರ ತತ್ವ ಆದರ್ಶವನ್ನು ಮನವರಿಕೆ ಮಾಡಿಕೊಟ್ಟು ಇಷ್ಟ ಲಿಂಗಧಾರಣೆಯ ಮತ್ತು ರುದ್ರಾಕ್ಷಿ ಧಾರಣೆಯ ಮಹತ್ವವನ್ನು ತಿಳಿಸಿ ಬರಲು  ನಾವು ತೆರಳುತ್ತಿದ್ದೇವೆ. ನಿಮ್ಮೆಲ್ಲರ  ಪ್ರೀತಿ ಸದಾ ಇರಲಿ ಎಂದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕನವಾಡಿ ಹಾಗೂ ಮಹಿಳಾ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಅನೇಕ ಸದ್ಭಕ್ತರು  ಉಪಸ್ಥಿತರಿದ್ದರು.
Bottom Add3
Bottom Ad 2