GIT add 2024-1
Laxmi Tai add
Beereshwara 33

2 ಚಿನ್ನದ ಪದಕ ಗೆದ್ದ ಶೀತಲ್ ಗೆ ಸನ್ಮಾನ

ಮಾಜಿ ಶಾಸಕ ಎಸ್.ಸಿ.ಮಾಳಗಿ, ಮಾಜಿ ನಗರ ಸೇವಕಿ ಅನುಶ್ರೀ ದೇಶಪಾಂಡೆಯಿಂದ ಾರ್ಥಿಕ ನೆರವು

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಈಚೆಗೆ ಹೈದರಾಬಾದ್ ನಲ್ಲಿ ನಡೆದ 8ನೇ ಎಐಟಿಡಬ್ಲ್ಯೂಪಿಎಫ್ ರಾಷ್ಟ್ರೀಯ ಸಾಂಪ್ರದಾಯಿಕ ಕುಸ್ತಿ ಮತ್ತು 2019ರ ಪ್ಯಾಂಕ್ರೇಶನ್ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿ 2 ಚಿನ್ನದ ಪದಕ ಗೆದ್ದ ಶೀತಲ್ ಪಾಟೀಲ್ ಅವರನ್ನು ಸೋಮವಾರ ಸತ್ಕರಿಸಲಾಯಿತು.

ಬೆಳಗಾವಿಯ ಟಿವಿ ಸೆಂಟರ್ ನಿವಾಸಿಯಾಗಿರುವ ಶೀತಲ್ ಪಾಟೀಲ ಅವರನ್ನು ಅಲ್ಲಿನ ರಹವಾಸಿಗಳು ಸನ್ಮಾನಿಸಿ ಆರ್ತಿಕ ನೆರವು ನೀಡಿದರು. ಮಾಜಿ ಶಾಸಕ ಎಸ್.ಸಿ.ಮಾಳಗಿ 10 ಸವಿರ ರೂ. ಹಾಗೂ ಮಾಜಿ ನಗರ ಸೇವಕಿ ಅನುಶ್ರೀ ದೇಶಪಾಂಡೆ 5 ಸಾವಿರ ರೂ. ನೀಡಿ ಸನ್ಮಾನಿಸಿದರು.

Emergency Service

ಪ್ರತಿಭಾವಂತೆಯಾಗಿರುವ ಶೀತಲ್ ಬಡತನದಿಂದ ಬಂದಿದ್ದು ಆಕೆ ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಎಲ್ಲರೂ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಬೇಕು ಎಂದು ಅನುಶ್ರೀ ದೇಶಪಾಂಡೆ ಕೋರಿದರು.

ಟಿವಿ ಸೆಂಟರ್ ನ ಕೆಲವು ನಿವಾಸಿಗಳು ತಮ್ಮ ಕೈಲಾದಷ್ಟು ನೆರವು ನೀಡಿ, ಪ್ರೋತ್ಸಾಹಿಸಿದರು. ನಿಲಿಮಾ ಪಾವಶೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Bottom Add3
Bottom Ad 2