ಅಡುಗೆ ಮನೆ ಹೊಕ್ಕ ನಾಗಪ್ಪ; ಮನೆ ಜನರ ಜೀವ ಉಳಿಸಿದ ಬೆಕ್ಕುಗಳು !

ಪ್ರಗತಿವಾಹಿನಿ ಸುದ್ದಿ, ಗದಗ: ಎಲ್ಲಾದರೂ ಹೊರಟಾಗ ಬೆಕ್ಕು ಅಡ್ಡ ಬಂತೆಂದರೆ ಕೆಲಸವೇ ಕೆಟ್ಟುಹೋಯಿತು ಎನ್ನುವ ರೀತಿಯಲ್ಲಿ ಎರಡು ಹೆಜ್ಜೆ ಹಿಂದೆ ಬಂದು ಮುಂದೆ ಹೋಗುವವರಿಗೆ ಮನೆಯೊಂದರಲ್ಲಿ ಸಾಕಿದ್ದ ಬೆಕ್ಕುಗಳು ತಮ್ಮ ಪ್ರಾಮುಖ್ಯತೆ ಏನು? ಎಂಬುದನ್ನು ತೋರಿಸಿಕೊಟ್ಟಿವೆ. ಮನೆಯೊಳಗೆ ಹೊಕ್ಕ ನಾಗರಹಾವಿನ ಸುಳಿವು ನೀಡುವ ಮೂಲಕ ಮನೆಯವರನ್ನು ಎಚ್ಚರಿಸಿ ಜೀವ ಉಳಿಸಿದ ಮಾರ್ಜಾಲಗಳಿಗೀಗ ಕೃತಜ್ಞತಾ ಭಾವದ ಸುರಿಮಳೆಯಾಗುತ್ತಿದೆ. ಈ ಘಟನೆ ನಡೆದಿದ್ದು ಗದಗ ಜಿಲ್ಲೆಯ ನರಗುಂದ ಪಟ್ಟಣದ ಅಂಬೇಡ್ಕರ್ ನಗರದಲ್ಲಿ. ಲಕ್ಷ್ಮಣ ಚಲವಾದಿ ಎಂಬುವವರ ಮನೆಯಲ್ಲಿ ಬೆಕ್ಕುಗಳನ್ನು ಸಾಕಲಾಗಿದೆ. … Continue reading ಅಡುಗೆ ಮನೆ ಹೊಕ್ಕ ನಾಗಪ್ಪ; ಮನೆ ಜನರ ಜೀವ ಉಳಿಸಿದ ಬೆಕ್ಕುಗಳು !