ಪಶ್ಚಿಮ ಘಟ್ಟದಲ್ಲಿ ಮುಂದುವರೆದ ಸತತಧಾರೆ: ಹಲವೆಡೆ ವಿದ್ಯುತ್ ಕಡಿತ, ಮನೆ ಗೋಡೆ ಕುಸಿತ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರೆದಿದೆ. ಶುಕ್ರವಾರ ರಾತ್ರಿ ಸುರಿದ ಮಳೆಯ ರಭಸಕ್ಕೆ ತಾಲೂಕಿನ ಮಂತುರ್ಗಾ ಬಳಿಯ ಅಲಾತ್ರಿ ಹಳ್ಳದ ಸೇತುವೆಯ ಮೇಲೆ ನೀರು ಹರಿಯಲಾರಂಭಿಸಿದೆ. ಲೋಂಡಾ-ವರ್ಕಡ ಮಾರ್ಗಮಧ್ಯದ ಹಳ್ಳದ ಸೇತುವೆಯಲ್ಲೂ ನೀರು ಹರಿದು ಸಂಚಾರ ಸ್ಥಗಿತವಾಗಿದೆ. ತಾಲೂಕಿನ ಗವ್ವಾಳಿ, ಅಮಗಾಂವ, ಕೃಷ್ಣಾಪುರ, ಹುಳಂದ, ಸಡಾ, ದೇಗಾಂವ ಮತ್ತು ಹಂದಿಕೊಪ್ಪ ಗೌಳಿವಾಡಾ ಗ್ರಾಮಗಳು ಮುಖ್ಯವಾಹಿನಿಯಿಂದ ಸಂಪರ್ಕ ಕಡಿದುಕೊಂಡು ನಡುಗಡ್ಡೆಗಳಾಗಿವೆ. ಸತತ ಮಳೆಯ ಕಾರಣ ಅರಣ್ಯ ಭಾಗದಲ್ಲಿ … Continue reading ಪಶ್ಚಿಮ ಘಟ್ಟದಲ್ಲಿ ಮುಂದುವರೆದ ಸತತಧಾರೆ: ಹಲವೆಡೆ ವಿದ್ಯುತ್ ಕಡಿತ, ಮನೆ ಗೋಡೆ ಕುಸಿತ