*ಸಿಟಿ ರೌಂಡ್ಸ್ ಹಾಕಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸಿಟಿ ರೌಂಡ್ಸ್ ಹಾಕಿ ಅವಶ್ಯಕ ಮುಂಜಾಗ್ರತಾ ಕ್ರಮಗಳ ಪರಿಶೀಲನೆಯನ್ನು ನಡೆಸಿದರು.  ಬಳಿಕ ಮಾಹಿತಿ ನೀಡಿದ ಅವರು, ಏಪ್ರೀಲ್, ಮೇ, ಜೂನ್ ತಿಂಗಳಲ್ಲೇ ನಗರದ ನಾಲೆಗಳ ಸ್ವಚ್ಛತೆಯನ್ನು ಪಾಲಿಕೆಯ ವತಿಯಿಂದ ಕೈಗೊಳ್ಳಲಾಗಿತ್ತು. ಅಲ್ಲದೇ ಚರಂಡಿಗಳ ಮತ್ತು ಒಳಚರಂಡಿಗಳ ಸ್ಚಚ್ಛತೆಗೆ ಗಮನಹರಿಸಲಾಗಿತ್ತು. ಮಹಾನಗರ ಪಾಲಿಕೆ, ಜಲಮಂಡಳಿ, ಸ್ಮಾರ್ಟ್ ಸಿಟಿ, ಅರಣ್ಯ ಇಲಾಖೆ, ಹೆಸ್ಕಾಂ ಸೇರಿದಂತೆ ಇನ್ನುಳಿದ ಅಧಿಕಾರಿಗಳ ವಿಶೇಷ ತಂಡ ನಗರದಲ್ಲಿ ಸಕ್ರಿಯವಾಗಿದ್ದು, ತುರ್ತುಪರಿಸ್ಥಿತಿಯಲ್ಲಿ ಶೀಘ್ರದಲ್ಲೇ ಸಹಾಯಕ್ಕೆ ಧಾವಿಸುತ್ತಿದೆ. … Continue reading *ಸಿಟಿ ರೌಂಡ್ಸ್ ಹಾಕಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ*