*ಸಿಲಿಂಡರ್ ಸ್ಫೋಟ: ವೃದ್ಧೆ ಸಾವು; ಮೂವರ ಸ್ಥಿತಿ ಗಂಭೀರ*
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ವೃದ್ಧೆ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಕೆ.ಆರ್.ಪುರಂನ ತ್ರಿವೇಣಿನಗರದಲ್ಲಿ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಸ್ಫೋಟದ ಭೀಕರತೆಗೆ ಅಕ್ಕ-ಪಕ್ಕದ ಎರಡು ಮೂರು ಮನೆಗಳು ಹಾನಿಯಾಗಿವೆ. ಇಂದು ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಅಕ್ಕಯ್ಯಮ್ಮ ಮೃತ ವೃದ್ಧೆ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಲಿಂಡರ್ ಸೋರಿಕೆಯಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Home add -Advt *BREAKING: … Continue reading *ಸಿಲಿಂಡರ್ ಸ್ಫೋಟ: ವೃದ್ಧೆ ಸಾವು; ಮೂವರ ಸ್ಥಿತಿ ಗಂಭೀರ*
Copy and paste this URL into your WordPress site to embed
Copy and paste this code into your site to embed