ಆಂಬ್ಯುಲೆನ್ಸ್ ಗೆ ಹಣವಿಲ್ಲದೆ ಶಿಶುವಿನ ಶವ ಚೀಲದಲ್ಲಿಟ್ಟು ತಂದ ನತದೃಷ್ಟ ತಂದೆ

ಪ್ರಗತಿವಾಹಿನಿ ಸುದ್ದಿ, ಜಬಲ್‌ಪುರ: ಆಂಬ್ಯುಲೆನ್ಸ್ ಗೆ ನೀಡಲು ಹಣವಿಲ್ಲದ ಕಾರಣ ವ್ಯಕ್ತಿಯೊಬ್ಬರು ತಮ್ಮ ಶಿಶುವಿನ ಶವವನ್ನು ಚೀಲದಲ್ಲಿಟ್ಟುಕೊಂಡು ತಂದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ. ಬುಡಕಟ್ಟು ಜನಾಂಗದ ಸುನೀಲ್ ಧುರ್ವೆ ಎಂಬುವವರು ಈ ರೀತಿ ಶಿಶುವಿನ ಶವ ಸಾಗಿಸಿದ ನತದೃಷ್ಟ ತಂದೆ. ಅವರ ಪತ್ನಿ ಜುಮ್ನಿಬಾಯಿ ಜಬಲ್‌ಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಆದರೆ ನವಜಾತ ಶಿಶು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಿದರೂ ಬದುಕಿ ಉಳಿಯಲಿಲ್ಲ. ಆಸ್ಪತ್ರೆಯವರು ಶಿಶುವಿನ ಶವವನ್ನು ದಂಪತಿಗೆ … Continue reading ಆಂಬ್ಯುಲೆನ್ಸ್ ಗೆ ಹಣವಿಲ್ಲದೆ ಶಿಶುವಿನ ಶವ ಚೀಲದಲ್ಲಿಟ್ಟು ತಂದ ನತದೃಷ್ಟ ತಂದೆ