ಟೋಲ್ ಪ್ಲಾಜಾದವರ ‘ಅನುಚಿತ’ ವರ್ತನೆ ತಡೆಯಲು ‘ಉಚಿತ’ದ ಮದ್ದು; ಹಾಲಿಗಳಿಗೆ ಫ್ರೀ.., ಮಾಜಿಗಳಿಗೂ ಫ್ರೀ..!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೈವೇಗಳಲ್ಲಿ ಟೋಲ್ ಪ್ಲಾಜಾದವರು ಶಾಸಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರಂತೆ. ರಾಜ್ಯ ವಿಧಾನಸಭೆ ಕಲಾಪದಲ್ಲಿ ಈ ಬಗ್ಗೆ ಕೇಳಿ ಬಂದ ಆಕ್ಷೇಪಕ್ಕೆ ಸ್ಪೀಕರ್ ಯು.ಟಿ. ಖಾದರ್ ಅವರು ಹೊಸ ಮದ್ದು ಶಿಫಾರಸು ಮಾಡಿದ್ದಾರೆ. ಅದೇನೆಂದರೆ ಹಾಲಿ ಶಾಸಕರಿಗಂತೂ ಸದ್ಯ ಫ್ರೀ ಇದೆ. ಇದರೊಂದಿಗೆ ಮಾಜಿ ಶಾಸಕರಿಗೂ ಫ್ರೀ..! ಟೋಲ್ ಪ್ಲಾಜಾಗಳಲ್ಲಿ ಶಾಸಕರ ಮೇಲೆ ಗೂಂಡಾ ವರ್ತನೆ ತೋರಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಸದನದ ಗಮನಕ್ಕೆ ಸೆಳೆದರು. … Continue reading ಟೋಲ್ ಪ್ಲಾಜಾದವರ ‘ಅನುಚಿತ’ ವರ್ತನೆ ತಡೆಯಲು ‘ಉಚಿತ’ದ ಮದ್ದು; ಹಾಲಿಗಳಿಗೆ ಫ್ರೀ.., ಮಾಜಿಗಳಿಗೂ ಫ್ರೀ..!