ಗುರುವಂದನಾ ಕಾರ್ಯಕ್ರಮ: ಕಲಾವಿದರಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸ್ವರಸಾಧನಾ ಸಂಗೀತ ಮಹಾವಿದ್ಯಾಲಯದ ವತಿಯಿಂದ ಬೆಳಗಾವಿಯ ಸರಸ್ವತಿ ವಾಚನಾಲಯದಲ್ಲಿ ಭಾನುವಾರ ಪಂಡಿತ ಪಲುಸ್ಕರ್ ಅವರ ಪುಣ್ಯಸ್ಮರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬೆಳಗಾವಿಯ ವಿವಿಧ ಕಲಾವಿದರಿಗೆ ಸನ್ಮಾನ ಮಾಡಲಾಯಿತು. ಅಲಂಕಾರ ಹಾಗೂ ವಿಷಾರದಾ ಪದವಿಯಲ್ಲಿ ಸಾಧನೆ ಮಾಡಿದ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ಅಭಿನಂದಿಸಲಾಯಿತು. ಸ್ವರಸಾಧನಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶಾಸ್ತ್ರೀಯ ಗಾಯನ ಹಾಗೂ ಸುಗಮ ಸಂಗೀತವನ್ನು ಪ್ರಸ್ತುತಪಡಿಸಿದರು. ತಬಲಾ ಸಾಥೀದಾರರಾಗಿ ಜಿತೇಂದ್ರ ಸಾಬಣ್ಣವರ್, ನಿತಿನ್ ಸುತಾರ್ ಹಾಗೂ ಸಂಚಿತ ಪಾಟೀಲ ಮತ್ತು ಹಾರ್ಮೋನಿಯಂ … Continue reading ಗುರುವಂದನಾ ಕಾರ್ಯಕ್ರಮ: ಕಲಾವಿದರಿಗೆ ಸನ್ಮಾನ