*ಸಾರಿಗೆ ಸಂಘಟನೆ ಮುಖಂಡ ಹೆಚ್.ವಿ.ಅನಂತಸುಬ್ಬರಾವ್ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಸಾರಿಗೆ ಸಂಘಟನೆಯ ಮುಖಂಡ ಹೆಚ್.ವಿ.ಅನಂತಸುಬ್ಬರಾವ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕಾರ್ಮಿಕರ ಕಣ್ಮಣಿ ಎಂದೇ ಹೆಸರಾಗಿದ್ದ ಹೆಚ್.ವಿ.ಅನಂತಸುಬ್ಬರಾವ್ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಲವು ಹೋರಾಟವನ್ನು ಮಾಡಿದ್ದ ಅನಂತಸುಬ್ಬರಾವ್, ಹೋರಾಟವನ್ನೇ ತಮ್ಮ ಜೀವನವನ್ನಾಗಿಸಿಕೊಂಡಿದ್ದರು. ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷರಾಗಿದ್ದರು. ನಾಳೆಯಿಂದ ಸಾರಿಗೆ ನೌಕರರು ಬೆಂಗ್ಳೂರು ಚಲೋ ಮುಷ್ಕರಕ್ಕೆ ಕರೆಕೊಟ್ಟಿದ್ದ ಸದರ್ಭದಲ್ಲೇ ಸಾರಿಗೆ ಮುಖಂಡ ಅನಂತಸುಬ್ಬರಾವ್ ವಿಧಿವಶರಾಗಿದ್ದಾರೆ. ನಾಳೆ ಮಲ್ಲೇಶ್ವರಂನ ಘಾಟೆ ಭವನದಲ್ಲಿ ಅನಂತಸುಬ್ಬರಾವ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. … Continue reading *ಸಾರಿಗೆ ಸಂಘಟನೆ ಮುಖಂಡ ಹೆಚ್.ವಿ.ಅನಂತಸುಬ್ಬರಾವ್ ಇನ್ನಿಲ್ಲ*