*ಸುದೀರ್ಘ ಗೈರಾಗಿದ್ದ ಶಿಕ್ಷಕನಿಗೆ ಸಂಬಳ ಬಿಡುಗಡೆ ಹಿನ್ನೆಲೆ; ಬಿಇಒ ಸೇರಿ ಮೂವರು ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿ ಆದೇಶ*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಶಾಲೆಗೆ ಸುದೀರ್ಘವಾಗಿ ಗೈರಾಗಿದ್ದ ಶಿಕ್ಷಕನಿಗೆ ವೇತನ ಬಿಡುಗಡೆ ಮಾಡಿದ್ದ ಕಾರಣಕ್ಕೆ ಬಿಇಒ ಹಾಗೂ ಇಬ್ಬರು ಎಫ್ ಡಿಎ ಅಧಿಕಾರಿಗಳು ಸೇರಿ ಮೂವರನ್ನು ಕಡ್ಡಾಯ ನಿವೃತ್ತಿಗೊಳಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. 2011ರ ಅಕ್ಟೋಬರ್ ನಿಂದ 2012ರ ಆಗಸ್ಟ್ ವರೆಗೆ 11 ತಿಂಗಳಕಾಲ ನಿರಂತರವಾಗಿ ಶಿಕ್ಷಕ ರೇಣುಕಾಚಾರ್ಯ ಶಾಲೆಗೆ ಗೈರಾಗಿದ್ದರು. ಆದರೂ ಶಿಕ್ಷಕನಿಗೆ ವೇತನ ಬಿಡುಗಡೆ ಮಾಡಲಾಗಿತ್ತು. ಶಿಕ್ಷಕ ರೇಣುಕಾಚಾರ್ಯ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರ ಸಹೋದರನಾಗಿದ್ದು ಅಂಬಲಗಾ ಪ್ರಾಥಮಿಕ ಶಾಲಾ ಶಿಕ್ಷಕ … Continue reading *ಸುದೀರ್ಘ ಗೈರಾಗಿದ್ದ ಶಿಕ್ಷಕನಿಗೆ ಸಂಬಳ ಬಿಡುಗಡೆ ಹಿನ್ನೆಲೆ; ಬಿಇಒ ಸೇರಿ ಮೂವರು ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿ ಆದೇಶ*