*ಮಹಾಮಳೆ ದುರಂತ: ಕರೆಂಟ್ ಶಾಕ್ ಗೆ ಇಬ್ಬರು ಆಟೋ ಚಾಲಕರು ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ದುರಂತಗಳು ಸಂಭವಿಸುತ್ತಿದ್ದು, ನಿನ್ನೆ ದಕ್ಷಿಣ ಕನ್ನಡದಲ್ಲಿ ಮನೆ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ಮಹಾಮಳೆಗೆ ಮಂಗಳೂರಿನಲ್ಲಿ ಇಬ್ಬರು ಆಟೋ ಚಾಲಕರು ಬಲಿಯಾಗಿದ್ದಾರೆ. ಕರೆಂಟ್ ಶಾಕ್ ಹೊಡೆದು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡದ ಪಾಂಡೇಶ್ವರದ ರೊಸಾರಿಯೋ ಶಾಲೆಯ ಬಳಿ ನಡೆದಿದೆ. ರಾಜು ಹಾಗೂ ದೇವರಾಜು ಮೃತ ಆಟೋ ಚಾಲಕರು. ಬಿರುಗಾಳಿ ಮಳೆಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಗೊತ್ತಾಗದೇ … Continue reading *ಮಹಾಮಳೆ ದುರಂತ: ಕರೆಂಟ್ ಶಾಕ್ ಗೆ ಇಬ್ಬರು ಆಟೋ ಚಾಲಕರು ಸ್ಥಳದಲ್ಲೇ ದುರ್ಮರಣ*