*ತೋಟದ ಮನೆಯಲ್ಲಿ ಇದ್ದಾಗ ಬಡಿದ ಸಿಡಿಲು: ಇಬ್ಬರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ : ಕಳೆದ ರಾತ್ರಿ ಸುರಿದ ಭಾರೀ ಮಳೆ ಹಾಗೂ ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಕೊಪ್ಪಳದ ಚುಕ್ಕನಕಲ್ ಬಳಿಯ ತೋಟದ ಮನೆಯಲ್ಲಿ ನಡೆದಿದೆ.  ಮೃತರನ್ನು ಮಂಜುನಾಥ (48), ಗೋವಿಂದಪ್ಪ (62) ಎಂದು ಗುರುತಿಸಲಾಗಿದೆ. ರಾತ್ರಿ ಭಾರೀ ಬಿರುಗಾಳಿ ಸಹಿತ ಮಳೆ ಶುರುವಾದಾಗ ಇಬ್ಬರೂ ಕಿಟಕಿಯನ್ನು ಮುಚ್ಚಲು ಹೋಗಿದ್ದರು. ಆಗ ಕಿಟಕಿಗೆ ಬಡಿದ ಸಿಡಿಲು ಇಬ್ಬರನ್ನೂ ಆಹುತಿ ತೆಗೆದುಕೊಂಡಿದೆ. ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Home add -Advt … Continue reading *ತೋಟದ ಮನೆಯಲ್ಲಿ ಇದ್ದಾಗ ಬಡಿದ ಸಿಡಿಲು: ಇಬ್ಬರ ದುರ್ಮರಣ*