*ಭೀಕರ ಅಗ್ನಿ ದುರಂತ: 35 ಜನರು ಸಜೀವದಹನ*

ಪ್ರಗತಿವಾಹಿನಿ ಸುದ್ದಿ: ಕಟ್ಟಡವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 35 ಜನರು ಸಜೀವದಹನವಾಗಿರುವ ಘಟನೆ ಕುವೈತ್ ನಲ್ಲಿ ಸಂಭವಿಸಿದೆ. ಕುವೈತ್ ನ ಕೇರಳ ಉದ್ಯಮಿಗೆ ಸೇರಿದ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ಮೃತರಲ್ಲಿ ನಾಲ್ವರು ಭಾರತೀಯರು ಎಂದು ತಿಳಿದುಬಂದಿದೆ. ದಕ್ಷಿಣ ಕುವೈತ್ ನ ಮಂಗಾಫ್ ನಗರದ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಮೃತರಲ್ಲಿ ಇಬ್ಬರು ತಮಿಳುನಾಡಿನವರು, ಓರ್ವ ಉತ್ತರ ಭಾರತ ಮೂಲದವರು ಎನ್ನಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. *ಪಾಕ್ ಪರ ಘೋಷಣೆ: ವ್ಯಕ್ತಿಗೆ ಥಳಿಸಿದ … Continue reading *ಭೀಕರ ಅಗ್ನಿ ದುರಂತ: 35 ಜನರು ಸಜೀವದಹನ*