ರಿಕ್ಷಾ ಚಾಲಕನಿಗೆ 12 ಕೋಟಿ ರೂ. ಲಾಟರಿ
ಗಣೇಶ ಚತುರ್ಥಿಯ ದಿನ ರಿಕ್ಷಾ ಚಾಲಕ ಜಯಪಾಲನ್ 300 ರೂ. ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದ
ಪ್ರಗತಿವಾಹಿನಿ ಸುದ್ದಿ, ತಿರುವನಂತಪುರಂ – ಕೇರಳ ಸರಕಾರದ ತಿರುವೋಣಂ (Onam) ಲಾಟರಿಯ ಬಂಪರ್ ಬಹುಮಾನ ರಿಕ್ಷಾ ಚಾಲಕರೊಬ್ಬರಿಗೆ ಬಂದಿದೆ.
ಗಣೇಶ ಚತುರ್ಥಿಯ ದಿನ ರಿಕ್ಷಾ ಚಾಲಕ ಜಯಪಾಲನ್ 300 ರೂ. ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದ. ಇದೀಗ ಫಲಿತಾಂಶ ಪ್ರಕಟವಾಗಿದ್ದು ಬಂಪರ್ ಬಹುಮಾನ ಬಂದಿದೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಮರಡು ನಿವಾಸಿ 58 ವರ್ಷದ ಆಟೋ ರಿಕ್ಷಾ ಚಾಲಕ ಜಯಪಾಲನ್ ಪಿ ಆರ್ ಈ ಬಾರಿಯ ಬಂಪರ್ ಬಹುಮಾನ ವಿಜೇತರು.