GIT add 2024-1
Laxmi Tai add
Beereshwara 33

ವರದಕ್ಷಿಣೆ ಪಡೆದು ಮದುವೆಯಾದ ಎರಡೇ ದಿನಕ್ಕೆ ಪತ್ನಿಯನ್ನು ತವರಿಗೆ ಕಳುಹಿಸಿದ ಭೂಪ

ಸಂಬಂಧಿಕರಲ್ಲೇ ಮದುವೆಯಾದರೂ ನಡೆಯಿತು ದುರಂತ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಲಾಕ್ ಡೌನ್ ನಡುವೆಯೂ ವಿವಾಹ ಸಮಾರಂಭಗಳು ಸರಳವಾಗಿ ನಡೆಯುತ್ತಿವೆ. ಈ ನಡುವೆ ಸಂಬಂಧಿಕರಲ್ಲೇ ಮದುವೆಯಾಗಿ ವರದಕ್ಷಿಣೆ ತೆಗೆದುಕೊಂಡಿದ್ದರೂ ಕೂಡ ಎರಡೇ ದಿನಕ್ಕೆ ಪತ್ನಿಯನ್ನು ತವರಿಗೆ ಕಳುಹಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಹರೀಶ್ ಎರಡು ದಿನಗಳ ಹಿಂದೆ ಸೋದರತ್ತೆ ಮಗಳನ್ನೇ ಮದುವೆಯಾಗಿ ವಂಚಿಸಿದ ವ್ಯಕ್ತಿ. ಹರೀಶ್ ಮದುವೆಯಾದ ಎರಡು ದಿನಕ್ಕೆ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದಾನೆ. ಈತ ಮೈಸೂರು ಜಿಲ್ಲೆಯ ಬೆಳವಾಡಿ ಗ್ರಾಮದವನು. ಜಿಲ್ಲೆಯ KRS ಸಮೀಪದ ಹೊಂಗಹಳ್ಳಿ ನಿವಾಸಿಗಳಾದ ತಾಯಮ್ಮ-ಈರಪ್ಪ ಮಗಳ ಜೊತೆ ವಿವಾಹವಾಗಿದ್ದನು.

Emergency Service

ಹರೀಶ್ ಮದುವೆಯಾದ ಎರಡೇ ದಿನಕ್ಕೆ ಹುಡುಗಿ ಮಾನಸಿಕ ರೋಗದಿಂದ ಬಳಲುತ್ತಿದ್ದಾಳೆ. ನಿಶಕ್ತಿ ಇರುವುದರಿಂದ ಮಗು ಆಗುವುದಿಲ್ಲ. ಇವಳ ಜೊತೆ ನನ್ನಿಂದ ಬಾಳೋಕೆ ಆಗೋದಿಲ್ಲ ಎಂದು ತವರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಘಾತಕ್ಕೆ ಒಳಗಾಗಿರುವ ಯುವತಿ, ನಾನು ಗಂಡನ ಜೊತೆಯಲ್ಲೇ ಬದುಕಬೇಕು. ಇಲ್ಲವಾದರೆ ಆತ್ಮಹತ್ಯೆಯೊಂದೇ ದಾರಿ ಎಂದು ಹೇಳುತ್ತಿದ್ದಾಳೆ.

ಮಗಳಿಗೆ ಸದ್ಯಕ್ಕೆ ಮದುವೆ ಮಾಡುವ ಉದ್ದೇಶ ಇರಲಿಲ್ಲ. ಆದರೆ ಈರಪ್ಪ ಅವರ ಅಕ್ಕನ ಮಗ ಹರೀಶ್ ಮದುವೆ ಮಾಡಿಕೊಡಿ, ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಕೇಳುತ್ತಿದ್ದ. ಗೊತ್ತಿಲ್ಲದವರಿಗೆ ಮದುವೆ ಮಾಡಿಕೊಡುವುದಕ್ಕಿಂತ ಸಂಬಂಧಿಕರಿಗೆ ಮದುವೆ ಮಾಡಿಕೊಟ್ಟರೆ ಮಗಳನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಕುಟುಂಬದವರು ನಂಬಿದ್ದಾರೆ. ಲಾಕ್‍ಡೌನ್ ನಡುವೆಯೂ ಸಾಲ ಮಾಡಿ 6 ಲಕ್ಷ ಹಣ ಹಾಗೂ 80 ಗ್ರಾಂ ಚಿನ್ನ ನೀಡಿ ಮದುವೆ ಮಾಡಿಕೊಟ್ಟಿದ್ದಾರೆ. ಆದರೆ ಎರಡೇ ದಿನಕ್ಕೆ ಮಗಳನ್ನು ತವರು ಮನೆಗೆ ಕಳುಹಿಸಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸುತ್ತಿದ್ದಾರೆ.

ಕುಟುಂಬದವರು ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

Bottom Add3
Bottom Ad 2