ಪಂಚಮಸಾಲಿ ಹೋರಾಟ; ನಮಗೆ ಭಿಕ್ಷೆ ಬೇಡ, ನಮ್ಮ ಹಕ್ಕು ನಮಗೆ ಬೇಕು ಎಂದ ಲಕ್ಷ್ಮಿ ಹೆಬ್ಬಾಳ್ಕರ್
ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ತಾರಕ್ಕೇರಿದ್ದು, ಶ್ರಮಿಕರು, ಸಂಘರ್ಷ ಜೀವಿಗಳಾದ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಶ್ರಮಿಕ ಜೀವಿಗಳಾದ, ಕಷ್ಟದ ಕಾಲದಲ್ಲೂ ಮುನ್ನುಗ್ಗುವ ಛಲಗಾರರಾಗಿರುವ ಪ್ರಂಚಮಸಾಲಿ ಸಮುದಾಯಕ್ಕೆ ಭಿಕ್ಷೆ ಬೇಡ. ನಮ್ಮ ಸಮಾಜಕ್ಕೆ ನ್ಯಾಯ ಬೇಕು. ನಮ್ಮ ಹಕ್ಕು ನಮಗೆ ಬೇಕು ಎಂದು ಹೇಳಿದರು.