GIT add 2024-1
Laxmi Tai add
Beereshwara 33

ಸಂಕ್ರಾಂತಿ ಪುಣ್ಯ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರುಪಾಲು

ಕೃಷ್ಣಾನದಿಯಲ್ಲಿ ದುರಂತ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಪುಣ್ಯಸ್ನಾನಕ್ಕೆಂದು ಕೃಷ್ಣಾನದಿಗೆ ಇಳಿದಿದ್ದ ಇಬ್ಬರು ನೀರುಪಾಲಾಗಿರುವ ಘಟನೆ ರಾಯಚೂರಿನ ಶಕ್ತಿನಗರದ ಬಳಿ ಕೃಷ್ಣಾನದಿಯಲ್ಲಿ ನಡೆದಿದೆ.

Emergency Service

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನದಿಸ್ನಾನಕ್ಕಾಗಿ ಐದಾರು ಸ್ನೇಹಿತರು ಕೃಷ್ಣಾನದಿಗೆ ಇಳಿದಿದ್ದಾರೆ. ಈ ವೇಳೆ ಗಣೇಶ್ (42), ಉದಯ್ ಕುಮಾರ್ (43) ಎಂಬುವವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗಣೇಶ್ ರಾಯಚೂರಿನ ನಿಜಲಿಂಗಪ್ಪ ಕಾಲೋನಿ ನಿವಾಸಿಯಾಗಿದ್ದರೆ, ಉದಯ್ ಕೆಇಬಿ ಕಾಲೋನಿ ನಿವಾಸಿ.

ಗಣೇಶ್ ಶವ ಪತ್ತೆಯಾಗಿದ್ದು, ಉದಯ್ ಶವಕ್ಕಾಗಿ ಶೋಧ ನಡೆದಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋವಿಡ್ ಲಸಿಕೆ ಪಡೆಯುತ್ತಿದ್ದಂತೆ ಎದ್ದು ಓಡಾಡಿದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ

Bottom Add3
Bottom Ad 2