*ಲೋಕಸಭೆಗೆ ನುಗ್ಗಿ ಅಶ್ರುವಾಯು ದಾಳಿ; ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದ ದುಷ್ಕರ್ಮಿ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪವುಂಟಾಗಿರುವ ಘಟನೆ ನಡೆದಿದೆ. ದುಷ್ಕರ್ಮಿಗಳಿಬ್ಬರು ಲೋಕಸಭಾ ಕಲಾಪದ ವೇಳೆ ಗ್ಯಾಲರಿಯಿಂದ ಜಿಗಿದು ಹಳದಿ ಬಣ್ಣ ಹೊಗೆಭರಿತ ವಸ್ತುವನ್ನು ಎಸೆದಿದ್ದಾರೆ. ಅಪರಿಚಿತ ವ್ಯಕ್ತಿಗಳಿಂದ ಕಲಾಪದೊಳಗೆ ಏಕಾಏಕಿ ದಾಳಿಯಾಗುತ್ತಿದ್ದಂತೆ ಸಂಸದರು ಬೆಚ್ಚಿ ಬಿದ್ದಿದ್ದಾರೆ. ತಕ್ಷಣ ಓರ್ವನನ್ನು ಹಿಡಿದಿದ್ದಾರೆ. ದುಷ್ಕರ್ಮಿ ಕರ್ನಾಟಕ ಮೂಲದವನೆಂದು ತಿಳಿದುಬಂದಿದೆ. ಇನ್ನೊಂದು ಪ್ರಮುಖ ವಿಚಾರವೆಂದರೆ ದುಷ್ಕರ್ಮಿಗಳಿಬ್ಬರು ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದುಕೊಂಡು ಕಲಾಪದ ಗ್ಯಾಲರಿಯಲ್ಲಿ ಕುಳಿತಿದ್ದರು ಎಂದು ತಿಳಿದುಬಂದಿದೆ. ದಾಳಿ ನಡೆಸಿದ ಇಬ್ಬರನ್ನು ಪೊಲೀಸರು ವಶಕ್ಕೆ … Continue reading *ಲೋಕಸಭೆಗೆ ನುಗ್ಗಿ ಅಶ್ರುವಾಯು ದಾಳಿ; ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದ ದುಷ್ಕರ್ಮಿ*