*ಕ್ರೇನ್ ಕುಸಿದು ಬಿದ್ದು 17 ಕಾರ್ಮಿಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಥಾಣೆ: ಸೇತುವೆ ಕಾಮಗಾರಿ ವೇಳೆ ಕ್ರೇನ್ ಯಂತ್ರ ಕುಸಿದು ಬಿದ್ದು 17 ಕಾರ್ಮಿಕರು ಸಾವನ್ನಪ್ಪಿರುವ ಘೋರ ದುರಂತ ಮಹಾರಾಷ್ಟ್ರದ ಶಹಾಪುರ ತಾಲೂಕಿನ ಸರ್ಲಾಂಬೆ ಬಳಿ ನಡೆದಿದೆ. ಸಮೃದ್ಧಿ ಮಹಾಮಾರ್ಗ ಮೂರನೇ ಹಂತದ ಕಾಮಗಾರಿ ವೇಳೆ ಈ ದುರಂತ ಸಂಭವಿಸಿದೆ. ಕಾಮಗಾರಿ ವೇಳೆ ಕ್ರೇನ್ ಕುಸಿದು ಬಿದ್ದಿದೆ. ಘಟನೆಯಲ್ಲಿ 17 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. … Continue reading *ಕ್ರೇನ್ ಕುಸಿದು ಬಿದ್ದು 17 ಕಾರ್ಮಿಕರು ದುರ್ಮರಣ*