*ಉತ್ತರಾಖಂಡದಲ್ಲಿ ಮತ್ತೊಂದು ದುರಂತ: ಕಂದಕಕ್ಕೆ ಉರುಳಿದ ಮಿನಿ ಬಸ್; 10 ಪ್ರಯಾಣಿಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಉತ್ತರಾಖಂಡದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮಿನಿ ಬಸ್ ಒಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 10 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ರುದ್ರಪ್ರಯಾಗ ಜಿಲ್ಲೆಯ ರೈತೋಲಿ ಬಳಿ ನಡೆದಿದೆ. ಮಿನಿ ಬಸ್ ನಲ್ಲಿ 23 ಜನರು ಪ್ರಯಾಣಿಸುತ್ತಿದ್ದರು. ರುದ್ರಪ್ರಯಾಗ ಜಿಲ್ಲೆಯ ರುಷಿಕೇಶ-ಭದ್ರಿನಾಥ ಹೆದ್ದಾರಿಯಲ್ಲಿ ಬಸ್ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಅಲಕನಂದಾ ನದಿಗೆ ಬಸ್ ಬಿದ್ದಿದ್ದು, ಸ್ಥಳದಲ್ಲೇ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 7 ಜನರು ಗಂಭೀರವಾಗಿ ಗಾಯಗೊಂಡಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಪೊಲೀಸರು … Continue reading *ಉತ್ತರಾಖಂಡದಲ್ಲಿ ಮತ್ತೊಂದು ದುರಂತ: ಕಂದಕಕ್ಕೆ ಉರುಳಿದ ಮಿನಿ ಬಸ್; 10 ಪ್ರಯಾಣಿಕರು ದುರ್ಮರಣ*