*ತೆಂಗಿನ ಕಾಯಿ ಎಂದುಕೊಂಡು ಪರಿಶೀಲಿಸುತ್ತಿದ್ದ ವೇಳೆ ಸ್ಫೋಟಗೊಂಡ ನಾಡಬಾಂಬ್*

ಪ್ರಗತಿವಾಹಿನಿ ಸುದ್ದಿ; ರಾಮನಗರ: ತೆಂಗಿನ ಕಾಯಿ ಎಂದು ಪರಿಶೀಲಿಸುತ್ತಿದ್ದ ವೇಳೆ ನಾಡಬಾಂಬ್ ಸ್ಫೋಟಗೊಂಡ ಘಟನೆ ರಾಮನಗರ ಜಿಲ್ಲೆಯ ನೇರಳಕಟ್ಟಿ ಗ್ರಾಮದಲ್ಲಿ ನಡೆದಿದೆ. ನೌಷಾದ್ ಪಾಷಾ (29) ಎಂಬುವವರಿಗೆ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಟ-ಮಂತ್ರ ಮಾಡಿಸಿಟ್ಟ ತೆಂಗಿನ ಕಾಯಿ ಇರಬೇಕು ಎಂದು ನೌಷಾದ್ ಪಾಷಾ ಪರಿಶೀಲಿಸುತ್ತಿದ್ದರು. ಈ ವೇಳೆ ಅದು ಸ್ಫೋಟಗೊಂಡು ಅವಘಡ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. *ಮೂರು ರಾಜ್ಯಗಳಲ್ಲಿ ಬಿಜೆಪಿ, ಒಂದು ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆ; ಸದ್ಯದ ಟ್ರೆಂಡ್ ಇಲ್ಲಿದೆ*