*ತೆಪ್ಪಮಗುಚಿ ದುರಂತ: ಮೂವರು ಯುವಕರು ನೀರುಪಾಲು*
ಪ್ರಗತಿವಾಹಿನಿ ಸುದ್ದಿ: ತೆಪ್ಪದಲ್ಲಿ ಊಟಕ್ಕೆ ಹೋಗಿದ್ದಾಗ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಬಿದ್ದ ಪರಿಣಾಮ ಮೂವರು ಯುವಕರು ನೀರುಪಾಲಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇಲ್ಲಿನ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ. ಹುಲಿದೇವರ ಬನದ ಸಂದೀಪ್ (35) ಸಿಗಂದೂರು ಚೇತನ್ (30) ಗಿಣಿವಾರದ ರಾಜು (28) ಮೃತ ದುರ್ದೈವಿಗಳು. ಮೂವರ ಮೃತದೇಹ ಇಂದು ಬೆಳಿಗ್ಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಶರಾವತಿ ನದಿಯಲ್ಲಿ 40 ಅಡಿ ಆಳದಲ್ಲಿ ಸಿಕ್ಕಿದೆ. Home add -Advt
Copy and paste this URL into your WordPress site to embed
Copy and paste this code into your site to embed