*ಅಪಘಾತದಲ್ಲಿ ಸ್ನೇಹಿತ ಸಾವು; ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ಯುವಕ*

ಪ್ರಗತಿವಾಹಿನಿ; ಶಿವಮೊಗ್ಗ; ಸ್ನೇಹಿತನ ಸಾವಿನ ಸುದ್ದಿ ಕೇಳಿ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬೈಕ್ ಅಪಘಾತದಲ್ಲಿ ಆನಂದ್ (30) ಎಂಬುವವರು ಮೃತಪಟ್ಟಿದ್ದರು. ಈ ವಿಷಯ ಕೇಳಿದ ಸ್ನೇಹಿತ ಸಾಗರ್ (22) ಶಾಕ್ ಆಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ-ಶಿರಾಳಕೊಪ್ಪ ನಡುವಿನ ಕೆ.ಎಸ್.ಆರ್.ಟಿ.ಸಿ ಡಿಪೋ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಅಪಘಾತದಲ್ಲಿ ಆನಂದ್ ಮೃತಪಟ್ಟಿದ್ದರು. ಆನಂದ್ ಬೈಕ್ ನಲ್ಲಿದ್ದ ನಟರಾಜ್ ಹಾಗೂ ಇನ್ನೊಂದು ಬೈಕ್ … Continue reading *ಅಪಘಾತದಲ್ಲಿ ಸ್ನೇಹಿತ ಸಾವು; ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ಯುವಕ*