*ತಂದೆಯನ್ನೇ ಕೊಚ್ಚಿ ಕೊಲೆಗೈದ ಮಗ*

ಪ್ರಗತಿವಾಹಿನಿ ಸುದ್ದಿ: ಆಸ್ತಿ ಆಸೆಗಾಗಿ ಮಗನೊಬ್ಬ ತನ್ನ ತಂದೆಯನ್ನು ಕೊಚ್ಚಿ ಕೊಲೆಗೈದಿರುವ ಘೋರ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಲವನಹಳ್ಳಿ ಗ್ರಾಮದಲ್ಲಿ ನಡೆದಿದೆ. 75 ವರ್ಷದ ತಂದೆ ವೆಂಕಟಪ್ಪ ಪುತ್ರನಿಂದಲೇ ಕೊಲೆಯಾದ ದುರ್ದೈವಿ. ಸಿದ್ದಪ್ಪ ತಂದೆಯನ್ನು ಹತ್ಯೆಗೈದ ಮಗ. ವೃದ್ಧ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಸಿದ್ದಪ್ಪ, ಕೃತ್ಯದ ಬಳಿಕ ಪರಾರಿಯಾಗಿದ್ದಾನೆ. ಇತ್ತೀಚೆಗಷ್ಟೇ ತಂದೆ ವೆಂಕಟಪ್ಪ, ತಮ್ಮ ಜಮೀನು ಮಾರಾಟ ಮಾಡಿ 25 ಲಕ್ಷ ರೂಪಾಯಿ ಹಣವನ್ನು ಮಗಳಿಗೆ ನೀಡಿದ್ದರು. ಇದರಿಂದ ಸಿದ್ದಪ್ಪ ಕೋಪಗೊಂಡಿದ್ದ. ಹಣವನ್ನು … Continue reading *ತಂದೆಯನ್ನೇ ಕೊಚ್ಚಿ ಕೊಲೆಗೈದ ಮಗ*