*ಅವನೆಷ್ಟೇ ಕ್ರೂರಿಯಿರಲಿ, ಅಗೋಚರ ಅಸ್ತ್ರದ ಮುಂದೆ ಶರಣಾಗದ ಮನುಜನಿಲ್ಲ…*

ಲೇಖನ – ರವಿ ಕರಣಂ ಸುಮ್ಮನೆ ಕುಳಿತು ಯೋಚಿಸುತ್ತಿದ್ದಾಗ, ಇದೊಂದು ಮಾತು ಒಳತೂರಿ,ಬೆನ್ನು ಹತ್ತಿಕಾಡತೊಡಗಿತು. ಜಗತ್ತಿನಲ್ಲಿಯೇ ಅತ್ಯಂತ ಹರಿತವಾದ,ಪ್ರಬಲವಾದ ಆಯುಧ ಯಾವುದು? ಶ್ರೀ ಕೃಷ್ಣನಲ್ಲಿದ್ದ ಚಕ್ರವೋ? ಬಲರಾಮನ ನೇಗಿಲೋ? ಶಿವನ ಕೈಯಲ್ಲಿದ್ದ ತ್ರಿಶೂಲವೋ? ಅರ್ಜುನನ ಪಾಶುಪತಾಸ್ತ್ರವೋ? ಭೀಮ-ದುರ್ಯೋಧನರ ಗದೆಗಳೋ? ಇತ್ಯಾದಿ ಇತ್ಯಾದಿ … ಎಂದುಕೊಂಡಾಗ, ಪ್ರಬಲ ಅಸ್ತ್ರ “ಮನಸಾಕ್ಷಿ” ಯಲ್ಲದೇ ಮತ್ತೊಂದಿಲ್ಲ ಅನಿಸಿತು. ಎಲ್ಲಾ ಆಯುಧಗಳಿಗಿಂತಲೂ ಅತ್ಯಂತ ಹರಿತವಾದದ್ದು ಯಾವುದು ಎಂದು ಕೇಳಿದರೆ ನಿಮಗೆ ತೋಚಿದಂತೆ ಉತ್ತರ ಕೊಡುತ್ತೀರಿ. ಚಾಕು, ಚೂರಿ, ಖಡ್ಗ,ಈಟಿ,ಭರ್ಚಿ, ಕುಡುಗೋಲು, ಮತ್ತೇನಾದರೂ ಆಗಿರಬಹುದು.ಅದಕ್ಕಿಂತ … Continue reading *ಅವನೆಷ್ಟೇ ಕ್ರೂರಿಯಿರಲಿ, ಅಗೋಚರ ಅಸ್ತ್ರದ ಮುಂದೆ ಶರಣಾಗದ ಮನುಜನಿಲ್ಲ…*