*ಕಲುಷಿತ ಆಹಾರ ಸೇವನೆಯ ಶಂಕೆ: 63 ಕುರಿಗಳ ದಾರುಣ ಸಾವು*

ಪ್ರಗತಿವಾಹಿ‌ನಿ ಸುದ್ದಿ: ಬಳ್ಳಾರಿ ನಿಲ್ಲೆಯ ಸಿರಗುಪ್ಪ ತಾಲೂಕಿನ ಹೆರಕಲ್ಲು ಗ್ರಾಮದಲ್ಲಿ ಕಲುಷಿತ ಆಹಾರ ಸೇವಿಸಿ 63ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾದ ಘಟನೆ ನಡೆದಿದೆ. ಗ್ರಾಮದ ಗುಮ್ಮಡಿ ರಾಜಶೇಖರ, ಗಾದಿಲಿಂಗ ಹಾಗೂ ಮಂಜಪ್ಪ ಇವರಿಗೆ ಸೇರಿದ ಕುರಿಮಂದೆ ಮಂಗಳವಾರದಿಂದ ಅನಾರೋಗ್ಯಕ್ಕೆ ಈಡಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿಯಿಂದ ಒಂದೊಂದಾಗಿ ಸಾವಿಗೀಡಾಗಿ ಬುಧವಾರ ಸಂಜೆ ವೇಳೆಗೆ 63 ಕುರಿಗಳು ಸತ್ತಿವೆ. ಔಷಧಿ ನೀಡಿದರೂ ಸಾವಿನ ಸಂಖ್ಯೆ ನಿಲ್ಲುತ್ತಿಲ್ಲ ಎಂದು ಕುರಿಗಾಹಿ ಗಾದಿಲಿಂಗ ಆತಂಕ ವ್ಯಕ್ತಪಡಿಸಿದರು. ಪಶು ಇಲಾಖೆಯ … Continue reading *ಕಲುಷಿತ ಆಹಾರ ಸೇವನೆಯ ಶಂಕೆ: 63 ಕುರಿಗಳ ದಾರುಣ ಸಾವು*