*ತೀರ್ಥಸ್ನಾನಕ್ಕೆ ಹೋದಾಗ ದುರಂತ: ಇಬ್ಬರು ಬಾಲಕರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ನದಿಯಲ್ಲಿ ಮುಳುಗುತ್ತಿದ್ದ ಓರ್ವ ಬಾಲಕನನ್ನು ರಕ್ಷಿಸಲು ಹೋಗಿ ಇನ್ನೋರ್ವ ಬಾಲಕನೂ ನೀರುಪಾಲಾಗಿರುವ ಘಟನೆ ಕಲಬುರ್ಗಿ ಜಿಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ನಡೆದಿದೆ. ಗಾಣಗಾಪುರದ ಸಂಗಮದ ಅಷ್ಟತೀರ್ಥ ಸ್ಥಾನಕ್ಕೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾಗಿ, ಸಾವನ್ನಪ್ಪಿದ್ದಾರೆ. ಪ್ರಕಾಶ್ (15) ಹಾಗೂ ಸೋನು (16) ಮೃತ ಬಾಲಕರು. ಸ್ನಾನಕ್ಕೆಂದು ನದಿಗೆ ಇಳಿದಿದ್ದ ಸೋನು ಎಂಬಾತ ನೀರುಪಾಲಾಗುತ್ತಿದ್ದ. ಈ ವೇಳೆ ಆತನನ್ನು ರಕ್ಷಿಸಲೆಂದು ಪ್ರಕಾಶ್ ಕೂಡ ನದಿಗಿಳಿದಿದ್ದಾನೆ. ಇಬ್ಬರೂ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಎಸ್ … Continue reading *ತೀರ್ಥಸ್ನಾನಕ್ಕೆ ಹೋದಾಗ ದುರಂತ: ಇಬ್ಬರು ಬಾಲಕರು ನೀರುಪಾಲು*