*ಯುವಕರ ಗಲಾಟೆ ವೇಳೆ ಆಕಸ್ಮಿಕವಾಗಿ ವೃದ್ಧನಿಗೆ ಬಿದ್ದ ಬ್ಯಾಟ್ ಏಟು; ಅಮಾಯಕ ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಯುವಕರಿಬ್ಬರ ಗಲಾಟೆ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಅಮಾಯಕ ವೃದ್ಧರೊಬ್ಬರು ಬಲಿಯಾಗಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ. ಅಗ್ರಹಾರ ನಿವಾಸಿ ಲಿಂಗಣ್ಣ ಮೃತರು. ವೆಂಕಟೇಶ್ ಹಾಗೂ ಆಕಾಶ್ ಎಂಬ ಯುವಕರು ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ವೃದ್ಧ ಲಿಂಗಣ್ಣ ಯುವಕರ ಗಲಾಟೆಯನ್ನು ರಸ್ತೆ ಬಳಿ ನಿಂತು ನೋಡುತ್ತಿದ್ದರು. ಗಲಾಟೆ ಕೈಯಲ್ಲಿದ್ದ ಬ್ಯಾಟ್ ನಿಂದ ಹೊಡೆದುಕೊಳ್ಳುವ ಹಂತಕ್ಕೂ ತಲುಪಿದೆ. ವೆಂಕಟೇಶ್ ಎಂಬಾತ ಆಕಾಶ್ ನಿಗೆ ಜೋರಾಗಿ ಬ್ಯಾಟ್ ಬೀಸಿದ್ದಾನೆ. ತಕ್ಷಣ ಆಕಾಶ್ ಬ್ಯಾಟ್ ತಪ್ಪಿಸಿಕೊಂಡಿದ್ದಾನೆ. … Continue reading *ಯುವಕರ ಗಲಾಟೆ ವೇಳೆ ಆಕಸ್ಮಿಕವಾಗಿ ವೃದ್ಧನಿಗೆ ಬಿದ್ದ ಬ್ಯಾಟ್ ಏಟು; ಅಮಾಯಕ ಸ್ಥಳದಲ್ಲೇ ದುರ್ಮರಣ*