*MLC ಸೀಟ್ ಆಮಿಷ ತೋರಿ 1.5 ಕೋಟಿ ವಂಚನೆ: ಸಿದ್ದರಾಮಯ್ಯ ಆಪ್ತ ಯರ್ರಿಸ್ವಾಮಿ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ಸದಸ್ಯತ್ವದ ನಾಮನಿರ್ದೇಶನ ಮಾಡಿಸುತ್ತೇನೆ ಎಂದು ನಂಬಿಸಿ ಮಹಿಳೆಯರಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ ಆರೋಪದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದ ವ್ಯಕ್ತಿ ಎಂದು ಹೇಳಿಕೊಂಡಿದ್ದ ಪತ್ರಕರ್ತ ಯರ್ರಿಸ್ವಾಮಿ ಮತ್ತು ಅವರ ಸಹಚರರಾದ ಸಿದ್ದರಾಜು, ಬಸವರಾಜು ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಂಗಳೂರು ಮೂಲದ 54 ವರ್ಷದ ಮಹಿಳೆ 2024 ರಲ್ಲಿ ವಿಧಾನಸೌಧದಲ್ಲಿ ಯರ್ರಿಸ್ವಾಮಿ ಪರಿಚಯವಾಗಿದ್ದರು. ತಾವು ಕಾಂಗ್ರೆಸ್ ಮಾಧ್ಯಮ ವಕ್ತಾರ, ಎಐಸಿಸಿ ನಾಯಕ … Continue reading *MLC ಸೀಟ್ ಆಮಿಷ ತೋರಿ 1.5 ಕೋಟಿ ವಂಚನೆ: ಸಿದ್ದರಾಮಯ್ಯ ಆಪ್ತ ಯರ್ರಿಸ್ವಾಮಿ ವಿರುದ್ಧ FIR ದಾಖಲು*