*ಯಶ್ ಹುಟ್ಟುಹಬ್ಬದ ವೇಳೆ ದುರಂತ; ಕಟೌಟ್ ಕಟ್ಟುತ್ತಿದ್ದ ಮೂವರು ಅಭಿಮಾನಿಗಳು ದಾರುಣ ಸಾವು*

ಪ್ರಗತಿವಾಹಿನಿ ಸುದ್ದಿ; ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಟೌಟ್ ಕಟ್ಟುತ್ತಿದ್ದ ವೇಳೆ ದುರಂತ ಸಂಭವಿಸಿದ್ದು, ಕರೆಂಟ್ ಶಾಕ್ ಹೊಡೆದು ಮೂವರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಯಶ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಶುಭಾಷಯ ಕೋರಲು ಅಭಿಮಾನಿಗಳು ಗದಗದ ಲಕ್ಷ್ಮೀಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಬೃಹತ್ ಕಟೌಟ್ ಕಟ್ಟುತ್ತಿದ್ದರು. ಕಟೌಟ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹನುಮಂತ (21), ಮುರಳಿ (20), ನವೀನ್ ಗಾಜಿ (19) ಮೃತ … Continue reading *ಯಶ್ ಹುಟ್ಟುಹಬ್ಬದ ವೇಳೆ ದುರಂತ; ಕಟೌಟ್ ಕಟ್ಟುತ್ತಿದ್ದ ಮೂವರು ಅಭಿಮಾನಿಗಳು ದಾರುಣ ಸಾವು*