Latest

ಕಾರವಾರದ ವಿಕ್ರಮಾದಿತ್ಯ ನೌಕೆಯಲ್ಲಿ ಬೆಂಕಿ: ಓರ್ವ ಬಲಿ

ಪ್ರಗತಿವಾಹಿನಿ ಸುದ್ದಿ, ಕಾರವಾರ

ಇಲ್ಲಿಯ ಐಎನ್ಎಸ್ ವಿಕ್ರಮಾದಿತ್ಯ ಹಡಗಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಓರ್ವ ಅಧಿಕಾರಿ ಸಾವನ್ನಪ್ಪಿದ್ದಾರೆ. 

ಹಡಗು ಕಾರವಾರ ಬಂದರಿಗೆ ಪ್ರವೇಶಿಸುತ್ತಿದ್ದಂತೆ ಬೆಂಕಿ ಕಾಮಿಸಿಕೊಂಡಿದೆ. ತಕ್ಷಣ ತಹಬಂದಿಗೆ ತರಲಾಗಿದ್ದು, ಹಡಗಿಗೆ ಅಂತಹ ಅನಾಹುತ ಉಂಟಾಗಿಲ್ಲ. ಆದರೆ ಬೆಂಕಿ ನಿಯಂತ್ರಿಸಲು ಪ್ರಯತ್ನಿಸಿದ ಅಧಿಕಾರಿ ಡಿ.ಎಸ್.ಚವ್ಹಾಣ ಹೊಗೆಯಿಂದಾಗಿ ಉಸಿರುಗಟ್ಟಿ ಅಸ್ವಸ್ಥರಾದರು.  ತಕ್ಷಣ ಅವರನ್ನು ನೇವಲ್ ಆಸ್ಪತ್ರೆಗೆ ಸಾಗಿಸಲಾಯಿತದರೂ ಪ್ರಯೋಜನವಾಗಲಿಲ್ಲ. 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button