Latest

ಯಡಿಯೂರಪ್ಪ ಮೇಲೆ ಸಾವಿರಾರು ಕೋಟಿ ಕಪ್ಪ ಕೊಟ್ಟ ಆರೋಪ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಕ್ಷದ ರಾಷ್ಟ್ರ ನಾಯಕರಿಗೆ 1800 ಕೋಟಿ ರೂ. ಕಪ್ಪ ಕೊಟ್ಟಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.

ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸರ್ಜೆವಾಲಾ ಈ ಆರೋಪ ಮಾಡಿದ್ದು, ಎಲ್ಲ ವಿವರವನ್ನು ಯಡಿಯೂರಪ್ಪ ತಮ್ಮ ಡೈರಿಯಲ್ಲಿ ಬರೆದಿಟ್ಟಿದ್ದು, ಪ್ರತಿ ಪೇಜ್ ಗೆ ಸ್ವತಃ ಸಹಿ ಮಾಡಿದ್ದಾರೆ ಎಂದಿದ್ದಾರೆ.

ಅರುಣ ಜೈಟ್ಲೆ, ಲಾಲಕೃಷ್ಣ ಅಡ್ವಾಣಿ, ರಾಜನಾಥ ಸಿಂಗ್, ನಿತಿನ ಗಡಕರಿ ಮೊದಲಾದವರಿಗೆ ಹಣ ನೀಡಲಾಗಿದೆ ಎಂದು ಡೈರಿಯಲ್ಲಿ ಬರೆಯಲಾಗಿದೆ. ಈ ಡೈರಿ ಐಟಿ ಅಧಿಕಾರಿಗಳ ಬಲಿ 2017ರಿಂದ ಇದೆ. ಆದರೆ ಈ ಬಗ್ಗೆ ತನಿಖೆ ನಡೆಸಲು ಪ್ರಧಾನಿ ಕೇಳುತ್ತಿಲ್ಲ ಎಂದು ಅರು ಆರೋಪಿಸಿದ್ದಾರೆ.

Home add -Advt

ಆದರೆ, ಇದೆಲ್ಲ ನಕಲಿ ಡೈರಿ. ಎಲ್ಲವೂ ಸುಳ್ಳು. ಈ ಬಗ್ಗೆ ಐಟಿ ಇಲಾಖೆ ಈಗಾಗಲೆ ತನಿಖೆ ನಡೆಸಿ ಕ್ಲೀನ್ ಚಿಟ್ ನೀಡಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

 

Related Articles

Back to top button