ಪ್ರಗತಿವಾಹಿನಿ ಸುದ್ದಿ, ತುಮಕೂರು
ಬೆಂಗಳೂರು- ಕೊಲ್ಲಾಪುರ ರಾಣಿಚನ್ನಮ್ಮ ಎಕ್ಸ್ಪ್ರೆಸ್ ರೈಲು ವಿಳಂಬವಾಗಿ ಚಲಿಸುತ್ತಿರುವುದರಿಂದ ಆಕ್ರೋಶಗೊಂಡ ಪ್ರಯಾಣಿಕರು ತುಮಕೂರು ಬಳಿ ರೈಲು ತಡೆದು ಪ್ರತಿಭಟಿಸಿದರು.
ಈಗ ಸ್ವಲ್ಪಹೊತ್ತು ಮೊದಲು ಈ ಘಟನೆ ನಡೆದಿದೆ.
ನಿನ್ನೆ ಸಂಜೆ ಎಂಜಿನ್ ದೋಷದಿಂದಾಗಿ ರೈಲು ಸುಮಾರು 3 ಗಂಟೆ ವಿಳಂಬವಾಗಿ ಹೊರಟಿತ್ತು. ರಷೈಲಿನಲ್ಲಿ ಬೇರೆ ಬೇರೆ ಪರೀಕ್ಷಾರ್ಥಿಗಳಿದ್ದರು. ಸಮಯಕ್ಕೆ ಸರಿಯಾಗಿ ಬೆಂಗಳೂರು ತಲುಪಿಸುವುದಾಗಿ ಅಧಿಕಾರಿಗಳು ನೀಡಿದ್ದ ಭರವಸೆ ಹುಸಿಯಾದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ.