ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕೇಂದ್ರದ ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಸುರೇಶ ಅಂಗಡಿ ಇಂದು ಬೆಳಗಾವಿಗೆ ಆಗಮಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಅವರು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು ಅಭಿಮಾನಿಗಳು ಅದ್ಧೂರಿಯ ಸ್ವಾಗತ ಕೋರಲು ನಿರ್ಧರಿಸಿದ್ದಾರೆ.
ಇಂದು ಸುರೇಶ ಅಂಗಡಿಯವರ ಜನ್ಮದಿನವೂ ಹೌದು. ನವದೆಹಲಿಯಲ್ಲಿ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಂಡರು.