Latest

ಪೇಜಾವರ ಶ್ರೀಗಳಿಂದ ಬೆಳಗಾವಿಯಲ್ಲಿ ಶ್ರೀರಾಮನವಮಿ ಉತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಹರಿದಾಸ ಸೇವಾ ಸಮಿತಿಯವರು ಏ.೧೨ ರಿಂದ ೧೪ ರವರೆಗೆ ಮೂರು ದಿನಗಳ ಹರಿದಾಸ ಹಬ್ಬ ಕಾರ್‍ಯಕ್ರಮ ಆಯೋಜಿಸಿದ್ದು, ನಾಡಿನ ಹಿರಿಯ ಸನ್ಯಾಸಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದಂಗಳವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀರಾಮ ನವಮಿ ಉತ್ಸವ ಆಚರಿಸಲಿದ್ದಾರೆ. 
ಭಕ್ತರು ಗೃಹಪಾದ ಪೂಜೆ, ಸಾಮೂಹಿಕ ಭಿಕ್ಷಾ, ರಾತ್ರಿ ತೊಟ್ಟಿಲು ಪೂಜೆ, ಶ್ರೀಪಾದಂಗಳವರ ಪಾದಪೂಜೆ ಇತ್ಯಾದಿಗಳನ್ನು ಮಾಡಿಸುವುದರ ಮೂಲಕ ಗುರುಕಾಣಿಕೆಯನ್ನು ಸಮರ್ಪಿಸಬಹುದಾಗಿದೆ.
ಏ.೧೨ ರಂದು ಬೆಳಗ್ಗೆ ೭ ರಿಂದ ೮.೩೦ ರವರೆಗೆ ಕೋನವಾಳ ಬೀದಿಯಲ್ಲಿರುವ ಸರಳಾಯ್ ಸಭಾಗೃಹದಲ್ಲಿ, ಬೆ. ೯ ರಿಂದ ೧೦ ವರೆಗೆ ವಡಗಾವಿಯ ವೆಂಕಟೇಶ್ವರ ಮಂದಿರದಲ್ಲಿ, ಏ.೧೪ ರಂದು ಬೆಳಗ್ಗೆ ೭ ರಿಂದ ೮.೩೦ ರವರೆಗೆ ಮಹಾಂತೇಶನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ, ಬೆ. ೯ ರಿಂದ ೧೦ ರವರೆಗೆ ತಿಳಕವಾಡಿಯ ಆರ್‌ಪಿಡಿ ವೃತ್ತದ ಬಳಿಯಿರುವ ಕೃಷ್ಣಮಠದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. 
ಹೆಚ್ಚಿನ ವಿವರಗಳಿಗೆ ಪಂ. ಗುರುರಾಜಾಚಾರ್ಯ ಜೋಶಿ ಮೊ: ೯೪೪೯೪೨೦೯೭೬, ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬಿ ಮೊ: ೯೮೮೬೪೫೭೭೩೫ ಹಾಗೂ ಕೇಶ ಮಾಹುಲಿ ಮೊ: ೯೪೪೮೬೩೧೪೪೬ ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button