Latest

ಪ್ರಜಾಕೀಯ ಧಗ ಧಗ ಉರಿಯಲ್ಲಾ, ಇದು ಬೂದಿ ಮುಚ್ಚಿದ ಕೆಂಡ -ಉಪೇಂದ್ರ

ಪ್ರಗತಿವಾಹಿನಿ ಸುದ್ದಿ, ಶಿರಸಿ:
ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿಪೀಠಗಳಲ್ಲೊಂದಾದ  ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ನಟ ಉಪೇಂದ್ರ ಭೇಟಿ ನೀಡಿ  ಮಾರಿಕಾಂಬೆಯ ಆಶೀರ್ವಾದ ಪಡೆದರು.
ನಂತರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪ್ರಜಾಕೀಯ ಅಭ್ಯರ್ಥಿ ಸುನೀಲ್ ಪವಾರ್ ಪರ ಸುದ್ದಿಗೋಷ್ಠಿ ನಡೆಸಿದ ಅವರು, ಪಕ್ಷದ ಗೆಲುವು ಸೋಲು ಮುಖ್ಯ ಅಲ್ಲ. ನಮ್ಮ ವಿಚಾರ ಜನರಿಗೆ ಮುಟ್ಟಬೇಕು. ನಮ್ಮ ವಿಚಾರ ವಾದವನ್ನು ಜನ ಒಪ್ಪಿದರೆ ಖಂಡಿತಾ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ರಾಜಕೀಯದಲ್ಲಿ ನಿರೀಕ್ಷೆ, ಸೋಲು-ಗೆಲುವು ಸ್ಟ್ರ್ಯಾಟಜಿ ಇರುತ್ತೆ. ಪ್ರಜಾಕೀಯದಲ್ಲಿ ಅಂತಹ ಯಾವುದೇ ನಿರೀಕ್ಷೆ ಇರಲ್ಲ. ಇದು ಜನರ ಧ್ವನಿ ಎಂದರು. ಅಲ್ಲದೇ ಪ್ರಜಾಕೀಯ ಬೂದಿ ಮುಚ್ಚಿದ ಕೆಂಡ ಇದ್ದಂತೆ. ಧಗ ಧಗ ಎಂದು ಉರಿಯಲ್ಲ. ಒಳಗೇ ಹಬ್ಬುತ್ತಿರುವ ಕೆಂಡ ಎಂದು ತಿಳಿಸಿದರು.

Related Articles

Back to top button