Election NewsPolitics

*ಚನ್ನಪಟ್ಟಣದಲ್ಲಿ ಸಿಪಿವೈ 100% ಗೆದ್ದೆ ಗೆಲ್ತಾರೆ; ಶಾಸಕ ರಮೇಶ್ ಬಾಬು ವಿಶ್ವಾಸ*

ಪ್ರಗತಿವಾಹಿನಿ ಸುದ್ದಿ: ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತದಾನ ಅಂತ್ಯವಾಗಿದೆ. ಇನ್ನೇನಿದ್ದರೂ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದ್ದು, ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ ಎನ್ನುವ ಚರ್ಚೆಗಳು, ಲೆಕ್ಕಾಚಾರಗಳು ಶುರುವಾಗಿವೆ. ಇದರ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್​ ಸುದ್ದಿಗೋಷ್ಠಿ ನಡೆಸಿ ಉಪಚುನಾವಣೆ ಬಗ್ಗೆ ಮಾತನಾಡಿದ್ದು, ಅವರ ಮಾತುಗಳನ್ನು ಗಮನಿಸಿದ್ರೆ ಸೋಲೋಪ್ಪಿಕೊಂಡಂತಿದೆ ಅಂತಾ ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗಳಿಗೆ ನಾಂದಿ ಮಾಡಿಕೊಟ್ಟಿದೆ.

ಮಂಡ್ಯದಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಚನ್ನಪಟ್ಟಣದಲ್ಲಿ ಸಿಪಿವೈ ಹಾಗೂ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಗೆದ್ದೆ ಗೆಲ್ತೇವೆ ಎಂದು‌ ವಿಶ್ವಾಸ ವ್ಯಕ್ತಪಡಿಸಿದರು. ಇದರ 

Home add -Advt

ಜೊತೆಗೆ ಮೂರು ಕ್ಷೇತ್ರದಲ್ಲೂ ಗೆಲ್ತೇವೆ ಅಂತಾ ಭರವಸೆಯ ಮಾತುಗಳನ್ನಾಡಿದ್ದಾರೆ.

ಇದೆ ವೇಳೆ ಸಿಪಿವೈರ ಮಾತುಗಳನ್ನು ಸಮರ್ಥಸಿದ ಅವರು ಚುನಾವಣಾ ಸಂದರ್ಭದಲ್ಲಿ ಅವರ ಅನುಭವದ ಮಾತು ಬರ್ತಾವೆ ಆದರೆ ಚನ್ನಪಟ್ಟಣದಲ್ಲಿ ಜನರು ಯೋಗೇಶ್ವರ್ ಅವರನ್ನ ಇಷ್ಟ ಪಟ್ಟಿದ್ದಾರೆ. ಹೀಗಾಗಿ ಸಿ.ಪಿ ಯೋಗೇಶ್ವರ್ ಗೆ ಮತ ಹಾಕಿದ್ದಾರೆ. ಗೆದ್ದೆ ಗೆಲ್ತೇವೆ ಎಂದರು.

ಇನ್ನು ಇದೆ ವೇಳೆ ಕೈ ಶಾಸಕರಿಗೆ 50 ಕೋಟಿ ಆಫರ್ ಅಪರೇಷನ್ ಕಮಲದ ವಿಚಾರ ಬಗ್ಗೆ ಮಾತನಾಡಿದ ಅವರು ಬಿಜೆಪಿ-ಜೆಡಿಎಸ್ ನವರೇ 50 ಕೋಟಿ ಆಫರ್ ಬಗ್ಗೆ ಹೇಳ್ತಿದ್ದಾರೆ. ಉಪ ಚುನಾವಣೆ ಬಳಿಕ ಸರ್ಕಾರ ಬಿದ್ದೋಗುತ್ತೆ ಅಂತ ಬಿಜೆಪಿ-ಜೆಡಿಎಸ್ ಹೇಳ್ತಿದ್ದಾರೆ.

ಬಿಜೆಪಿ-ಜೆಡಿಎಸ್ ಗೆ ಒಬ್ಬರ ಸರ್ಕಾರ ಬೀಳಿಸಿ ಅಭ್ಯಾಸ ಇದೆ. ಹೀಗಾಗಿ ಈ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಬೇಕು ಎಂದು ವ್ಯಂಗವಾಡಿದರು. ಈ ಆಫರ್ ನನಗೆ ಯಾರು ಕೊಟ್ಟಿಲ್ಲ.  ಸದ್ಯ ನಮ್ಮ ಒಬ್ಬ ಶಾಸಕರನ್ನೂ ಯಾರೂ ಕೊಂಡುಕೊಳ್ಳಲು ಆಗಲ್ಲ. ಈ ಹಿಂದೆ ಗಣಿಗ ರವಿಕುಮಾರ್ ಅವರು ಆರೋಪ ಮಾಡಿದ್ರು. ಕೊಂಡುಕೊಳ್ಳೊದಕ್ಕೆ ಆಯ್ತಾ? ಆಗಲ್ಲ. ಎಂದು ಖಡಕ್ ಗಾಗಿ ಹೇಳಿದರು. ನಾವು 136 ಶಾಸಕರು ಭದ್ರವಾಗಿದ್ದೇವೆ, ನಮ್ಮದು ಭದ್ರ ಕೋಟೆ ನಮ್ಮ ಸರಕಾರ ಸ್ಥಿರವಾಗಿ ಇರುತ್ತದೆ ಎಂದು ಹೇಳಿದರು.

Related Articles

Back to top button