Latest

ಸರಳವಾಗಿ ಉದ್ಯಮ ನಡೆಸುವ ಕುರಿತು ಅರಿವು ಕಾರ್ಯಕ್ರಮ

 

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸರಳವಾಗಿ ಉದ್ಯಮ ನಡೆಸುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಬೆಳಗಾವಿಯಲ್ಲಿ ಸೋಮವಾರ ನಡೆಯಿತು.

ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ, ಬೆಳಗಾವಿ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಹೊನಗಾ ಸಣ್ಣ ಕೈಗಾರಿಕೆಗಳ ಸಂಘ ಸಂಯುಕ್ತವಾಗಿ ಈ ಕಾರ್ಯಕ್ರಮ ಆಯೋಜಸಿದ್ದವು. 

Home add -Advt

ಕೈಗಾರಿಕಾ ನಿಯಮಗಳ ತಿಳಿವಳಿಕೆ ನೀಡುವ ಜೊತೆಗೆ ಹೊಸದಾಗಿ ಉದ್ಯಮ ಆರಂಭಿಸುವ ಮತ್ತು ಇರುವ ಉದ್ಯಮವನ್ನು ಬಲಪಡಿಸುವ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು. ಬೆಂಗಳೂರಿನ  ಎನ್ಎಸ್ಐಸಿ ಪ್ರಧಾನ ವ್ಯವಸ್ಥಾಪಕ ಪಿ.ರವಿಕುಮಾರ ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಯಮಿಗಳಿಗೆ ಮಾಹಿತಿ ನೀಡಿದರು. ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಸಿಗುವ ಸಾಲ ಸೌಲಭ್ಯ, ಸಹಾಯಧನ ಮತ್ತಿತರ ವಿವರವನ್ನು ನೀಡಿದರು. 

ಕಾಸಿಯಾ ಅಧ್ಯಕ್ಷ ಬಸವರಾಜ ಜವಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜು, ಜಿ.ಬಿ.ನಾಯ್ಕ, , ಅಶೋಕ ಕೋಳಿ, ಶ್ರೀಧರ ಉಪ್ಪಿನ್ ಮೊದಲಾದವರು ವೇದಿಕೆ ಮೇಲಿದ್ದರು. 

ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜುವಳಿ ಸ್ವಾಗತಿಸಿದರು. ಕಾಸಿಯಾ ಜಂಟಿ ಕಾರ್ಯದರ್ಶಿ ಸುರೇಶ ಸಾಗರ ನಿರೂಪಿಸಿದರು. ಸಿ.ಸಿ.ಹೊಂಡಕಟ್ಟಿ ವಂದಿಸಿದರು.

Related Articles

Back to top button