Kannada NewsLatest

ಸಿಕ್ಕಿಬಿದ್ದ ಅಗಸಗಿ ಎಮ್ಮೆ ಕದ್ದ ಖದಿಮರು

ಪ್ರಗತಿವಾಹಿನಿ ಸುದ್ದಿ, ಅಗಸಗಿ :

ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ಮೇ ೨೬ ರಂದು ನಡೆದ ಎಮ್ಮೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೋಲಿಸರು ೨ ಜನ ಆರೋಪಿಗಳನ್ನ ಬಂಧಿಸಿ ಕದ್ದ ಎಮ್ಮೆಗಳನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆಗಾಗಿ ವಿಚಾರಣೆಗೊಳಪಡಿಸಿದ್ದಾರೆ.

ಖಚಿತ ಮಾಹಿತಿ ಮತ್ತು ಲಭ್ಯವಾದ ಸಾಕ್ಷಿ ಅಧಾರಾದ ಮೇಲೆ ಅಗಸಗಿ ಗ್ರಾಮಕ್ಕೆ ಅಂಟಿಕೋಂಡಿರುವ ಪಕ್ಕದ ಗ್ರಾಮದ ೫ ಜನ ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಕಾಕತಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ೫ ಜನರಲ್ಲಿ ಕದ್ದ ಎಮ್ಮೆಗಳನ್ನು ಸಾಗಿಸಲು ಉಪಯೋಗಿಸಿತ್ತಿದ್ದ ಟೇಂಪೋ ಮಾಲಿಕನು ಕೂಡ ಇರುವುದಾಗಿ ತಿಳಿದು ಬಂದಿದೆ. ಇನ್ನುಳಿದಿಬ್ಬರು ನಾಪತ್ತೆಯಾಗಿದ್ದಾರೆ.

Home add -Advt
ಏನಿದು ಪ್ರಕರಣ..
ಮೇ ೨೬ ಅಗಸಗಿ ಗ್ರಾಮದ ಪ್ರಿಯಾ ಪುಂಡಲಿಕ ಸೋಮನಟ್ಟಿ ಎಂಬುವರಿಗೆ ಸೇರಿದ ಎಮ್ಮೆ ಡೈರಿ ಫಾರ್ಮಗೆ ನುಗ್ಗಿದ್ದ ಕಳ್ಳರು ಕಾವಲುಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಲಕ್ಷಾಂತರ ಮೌಲ್ಯದ ಮುರ್ರಾ ಜಾತಿಯ ೨ ಎಮ್ಮೆಗಳನ್ನ ಕದ್ದಿದ್ದರು. ಈ ಹಿಂದೆ ಎಮ್ಮೆ ಕಳ್ಳತನ ನಡೆದಿದ್ದರು ವ್ಯಕ್ತಿ ಮೇಲೆ ಮಾರಣಾಂತಿಕ ನಡೆಸಿ ಕಳ್ಳತನವಾಗಿದ್ದು ಇದೆ ಮೊದಲಾಗಿತ್ತು. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಇದನ್ನರಿತ ಬೆಳಗಾವಿ ನಗರ ಉಪ ಪೋಲಿಸ್ ಆಯುಕ್ತರಾದ ಯಶೋಧಾ ವಂಟಘೋಡೆ ಮತ್ತು ಎಸಿಪಿ ಶಿವಾರೆಡ್ಡಿ ಘಟಣಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ಮ ತಕ್ಷಣ ಬಂಧಿಸುವಂತೆ ಆದೇಶಿಸಿದ್ದರು. ಇದರ ಬೆನ್ನಟ್ಟಿದ ಕಾಕತಿ ಪೋಲಿಸರು ಶುಕ್ರವಾರ ಮಧ್ಯರಾತ್ರಿ ೨.೩೦ಕ್ಕೆ ಅಗಸಗಿ ಗ್ರಾಮದ ಪಕ್ಕದ ಗ್ರಾಮದ ೨ ಆರೋಪಿಗಳನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಸದ್ಯ ೫ ಜನರ ಗುಂಪೊಂದು ಇಂತಹ ಕಳ್ಳತನ ನಡೆಸಿದ್ದಾರೆಂದು ಬಂಧಿತ ಆರೋಪಿಗಳು ಬಾಯ್ಬಿಟ್ಟಿರುವುದಾಗಿ ಪೋಲಿಸ ಮೂಲಗಳಿಂದ ತಿಳಿದು ಬಂದಿದೆ.

ಕೇಸ್ ಮುಚ್ಚಲು ಹುನ್ನಾರ?

ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ಆರೋಪಿಗಳು ರಾಜಕೀಯ ಪ್ರಭಾವ ಬಳಿಸಿ ಪ್ರಕರಣ ಮುಚ್ಚಿ ಹಾಕಲು ಕುತಂತ್ರ ನಡೆಸಿರುವುದಾಗಿ ಗ್ರಾಮದಲ್ಲಿ ಸುದ್ದಿ ಹಬ್ಬಿದೆ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲಿಸ್ ವರಿಷ್ಠಾದಿಕಾರಿಗಳು ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಕಾಕತಿ ಪೋಲಿಸರಿಗೆ ಎಚ್ಚರಿಕೆ ನೀಡಿದ್ದಾರೆಂದು ಗೊತ್ತಾಗಿದೆ.

Related Articles

Back to top button