ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಯಲಹಂಕ ಏರ್ ಶೋ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಯಾರೋ ಸೇದಿ ಬಿಸಾಕಿದ ಸಿಗರೇಟ್ ಕಾರಣವಾಗಿರಬಹುದೆನ್ನುವ ಶಂಕೆ ವ್ಯಕ್ತವಾಗಿದೆ.
ಆ ಪ್ರದೇಶದಲ್ಲಿ ಪ್ರತಿಬಾರಿಯಂತೆ ಹುಲ್ಲಿನ ನಿರ್ವಹಣೆ ಗುತ್ತಿಗೆ ಸರಿಯಾಗಿ ಮಾಡಿಲ್ಲ. ಸರಿಯಾಗಿ ನೀರು ಹಾಕಿರಲಿಲ್ಲ. ಇದರಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿರುವ ಶಂಕೆಯೂ ಇದೆ ಎನ್ನಲಾಗಿದೆ.
ಪ್ರಾಥಮಿಕ ಅಂದಾಜಿನಂತೆ ಸುಟ್ಟು ಭಸ್ಮವಾದ ಕಾರುಗಳ ಸಂಖ್ಯೆ 300 ನ್ನು ದಾಟಿದೆ.