Belagavi NewsBelgaum NewsLatest

20 ಕೋಟಿ ರೂ. ಬಿಕ್ಕಟ್ಟು : ಆ.27 ರಂದು ಮಹಾನಗರ ಪಾಲಿಕೆ ತುರ್ತು ಸಭೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ತುರ್ತು ಸಭೆಯನ್ನು ಆ. ೨೭ ರಂದು ಬೆಳಗ್ಗೆ ೧೧:೩೦ ಗಂಟೆಗೆ ಪರಿಷತ್ ಸಭಾಗೃಹದಲ್ಲಿ ಆಯೋಜಿಸಲಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ, ಪರಿಷತ್ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚ್ಚ ನ್ಯಾಯಾಲಯ ಧಾರವಾಡ ಪೀಠ ಇಲ್ಲಿನ ನ್ಯಾಯಾಲಯ ನಿಂದನಾ ಅರ್ಜಿ ಸಂಖ್ಯೆ: 100058/2022 ರನ್ವಯ ಬೆಳಗಾವಿ ತಾಲ್ಲೂಕಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಿ.ಸ.ನಂ. 326/3, 326/5 ಹಾಗೂ 326/7 ರಲ್ಲಿನ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿ.ಬಿ. ರಸ್ತೆ ಅಗಲಿಕರಣದ ಕುರಿತಂತೆ ಸ್ವಾಧೀನಪಡಿಸಿಕೊಳ್ಳುವ ಜಮೀನಿನ ಅಂದಾಜು ವೆಚ್ಚ ರೂ. 20 ಕೋಟಿ ಅನುದಾನವನ್ನು ಭೂ ಮಾಲೀಕರಿಗೆ ಪಾವತಿಸುವ ಸಂಬಂಧ ಉಪವಿಭಾಗಾಧಿಕಾರಿಗಳು, ಬೆಳಗಾವಿ ಉಪವಿಭಾಗ, ಬೆಳಗಾವಿ ಇವರಿಗೆ ಬಿಡುಗಡೆಗೊಳಿಸುವ ಕುರಿತು ದಿನಾಂಕ: 27-08-2024 ರಂದು ಮುಂಜಾನೆ 11-30 ಗಂಟೆಗೆ ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭಾಗೃಹದಲ್ಲಿ ವಿಶೇಷ ತುರ್ತು ಪರಿಷತ್ ಸಭೆಯನ್ನು ಜರುಗಿಸಲಾಗುವುದು ಎಂದು ಪರಿಷತ್ ಕಾರ್ಯದರ್ಶಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button