Kannada NewsKarnataka News

ನೀರು ಕೊಟ್ಟ ಮಹಾ’ಲಕ್ಷ್ಮಿ’ : 20 ವರ್ಷದ ಕಣ್ಣೀರಿಗೆ ಮುಕ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಇಲ್ಲಿಯ ಜನರು ನೀರಿಗಾಗಿ ಕಳೆದ 20 ವರ್ಷದಿಂದ ಪರಿತಪಿಸುತ್ತಿದ್ದರು. ಬಂದ ಬಂದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕೈ ಮುಗಿಯುತ್ತಿದ್ದರು. ಮನವಿಗಳ ಮೇಲೆ ಮನವಿ ಸಲ್ಲಿಸಿ ಸುಸ್ತಾಗಿದ್ದರು. 
ಅವರ ಕಣ್ಣೀರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ನಗರದ ಸಂಕಲ್ಪ ಲೇ ಔಟ್ ಜನರ ಸಂಕಷ್ಟಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪರಿಹಾರ ಒದಗಿಸಿದ್ದಾರೆ. ನಲ್ಲಿ ಜೋಡಣೆ ಮೂಲಕ ಅಲ್ಲಿನ ಪ್ರತಿ ಮನೆಗೆ ನೀರಿನ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ನೀರು ಬರುತ್ತಿದ್ದಂತೆ ಜನರು ಆನಂದ ಭಾಷ್ಪ ಹರಿಸಿದರು. ಕೈ ಮುಗಿದು ಧನ್ಯವಾದ ಸಮರ್ಪಿಸಿದರು. 
`ಕಳೆದ ಇಪ್ಪತ್ತು ವರ್ಷಗಳಿಂದ ಸಂಕಲ್ಪ ಲೇ ಔಟ್ ‌ನ ಜನರು ನೀರಿನ ಅನಾನುಕೂಲತೆಯಿಂದ ಕಂಗೆಟ್ಟಿರುವ ಪರಿಸ್ಥಿತಿ ನನ್ನ ಗಮನಕ್ಕೆ ಬಂ ತಕ್ಷಣವೇ ಜನರ ಸಂಕಷ್ಟಕ್ಕೆ ಸ್ಪಂದಿಸಿ ಜನರಿಗೆ ನೀರಿನ ತೊಂದರೆಯನ್ನು ನಿವಾರಿಸಿ ಕೊಟ್ಟಿದ್ದೇನೆ. ಮನೆಯ ಮಗಳಾಗಿ ಅವರ ಕಷ್ಟದಲ್ಲಿ ಬಾಗಿಯಾಗಿದ್ದೇನೆ.   ಕೆಲವು ಮಹಿಳೆಯರು ಆನಂದ ಭಾಷ್ಪವನ್ನು ಹರಿಸಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು ಕಂಡು ನಿಜಕ್ಕೂ ನಾನು ಈ ಕ್ಷೇತ್ರದ ಶಾಸಕಿಯಾಗಿ ಜನರ ಜೀವನದಲ್ಲಿ ಬೆರೆಯುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯವೆನಿಸುತ್ತಿದೆ‘ ಎಂದು ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button