Kannada NewsKarnataka NewsNationalPolitics

*ಬಿಜೆಪಿ ಅವಧಿಯ 40% ಬಗ್ಗೆ ತನಿಖೆ ಆಗಲಿ*; *ಎಲ್ಲಾ ಪಕ್ಷಗಳ ಹಿರಿಯರಿಂದ ಹೊಂದಾಣಿಕೆ ರಾಜಕೀಯ*: *ಪ್ರತಾಪ ಸಿಂಹ ಕಿಡಿ*

ಪ್ರಗತಿವಾಹಿನಿ ಸುದ್ದಿ : ಮುಡಾ ಹಗರಣದಲ್ಲಿ ಬಿಜೆಪಿ-ಜೆಡಿಎಸ್‌ನವರೂ ಇದ್ದಾರೆ ಎಂದು ಹೇಳಲಾಗುತ್ತಿದ್ದು, ಇದಲ್ಲದೇ ಬಿಜೆಪಿ ಸರ್ಕಾರದ ಅವಧಿಯ 40% ಕಮಿಷನ್ ಹಗರಣದ ಬಗ್ಗೆಯೂ ರಾಜ್ಯ ಸರ್ಕಾರ ತನಿಖೆ ಮಾಡಿಸಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ತನಿಖಾ ಸಂಸ್ಥೆ ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆಯಲ್ವಾ, ಹೀಗಿದ್ದು ಕಾಂಗ್ರೆಸ್ ನವರು ಏಕೆ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಚುರುಕಾಗಿ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. PSI ಹಗರಣದ ಬಗ್ಗೆಯೂ ಯಾಕೆ ತನಿಖೆ ಮಾಡಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಆ ಪಕ್ಷ, ಈ ಪಕ್ಷ ಅಂತಾ ಇಲ್ಲ, ಎಲ್ಲಾ ಪಕ್ಷಗಳ ಹಿರಿಯರಿಂದ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ಮೈಸೂರು ನನ್ನ ಕರ್ಮ ಭೂಮಿ. ಇಲ್ಲೇ ಇದ್ದು ರಾಜಕಾರಣದಲ್ಲೇ ಮುಂದುವರಿಯುವೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button