Belagavi NewsBelgaum NewsKannada NewsKarnataka NewsLatest

*ಶನಿವಾರ ಭಗವದ್ಗೀತೆ ಮತ್ತು ಮೇನೆಜ್ಮೆಂಟ್ ಕಾರ್ಯಾಗಾರ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯಾದ್ಯಂತ ನಡೆಯುತ್ತಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಭಗವದ್ಗೀತಾ ಅಭಿಯಾನದ ಅಂಗವಾಗಿ ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ, ಸಂಸ್ಥೆಯ ಕುಡಚಿ ಕ್ಯಾಂಪಸ್ ನಲ್ಲಿ ಭಗವದ್ಗೀತೆ ಮತ್ತು ಮೇನೆಜ್ಮೆಂಟ್ ವಿಷಯದ ಒಂದು ದಿನದ ಕಾರ್ಯಾಗಾರ ನಡೆಯಲಿದೆ.

ಡಿಸೆಂಬರ್ 9 ರಂದು ಬೆಳಿಗ್ಗೆ 11.30ಕ್ಕೆ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ಕಾರ್ಯಾಗಾರ ಉದ್ಘಾಟಿಸಲಿದ್ದಾರೆ.

ವಿಶ್ರಾಂತ ಕುಲಪತಿ ಆಚಾರ್ಯ ಪ್ರೊ.ರಾಮಚಂದ್ರ ಭಟ್ ಕೊಟೆಮನೆ ಆಶಯ ಭಾಷಣ ಮಾಡಲಿದ್ದಾರೆ. ಬೆಂಗಳೂರು ಐ. ಐ. ಎಂ. ದ ಪ್ರೊ. ಬಿ. ಮಹಾದೇವನ್, ಅಮೃತ ವಿದ್ಯಾಪೀಠ ಅಮರಾವತಿಯ ಪ್ರೊ. ಡಾ. ಅನಂತಶರ್ಮಾ ಹಾಗೂ ಎನ್. ಎಸ್. ಬಿ. ಬೆಂಗಳೂರಿನ ಡಾ. ಪಾರ್ಥಸಾರಥಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಸಿದ್ದಾಪುರದ ಶಿರಳಗಿಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಸಮಾರೋಪ ಭಾಷಣ ಮಾಡಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button